Breaking News

ಜನರನ್ನು ಗದರಿಸಿದ ವರುಣ: ಎಲ್ಲೆಡೆಯೂ ಮಳೆಯೋ‌ ಮಳೆ

ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮಳೆರಾಯ ಅಬ್ಬರಿಸಿದ್ದಾನೆ.‌ಬೆಳ್ಳಂಬೆಳಿಗ್ಗೆಯಿಂದ ಆರಂಭವಾದ ಮಳೆ ಹುಬ್ಬಳ್ಳಿ ಜನರನ್ನು ಗದುರಿಸಿದೆ. ಮೋಡ ಕವಿದ ವಾತಾವರಣದಲ್ಲಿ ಸುರಿದ ಮಳೆಯಿಂದ ಜನರು ಮಳೆಯಲ್ಲಿ ಸಿಲುಕಿಕೊಂಡು ಪರದಾಡುವಂತಾಗಿದೆ.ಹೌದು..ವಾಣಿಜ್ಯನಗರಿ ಹುಬ್ಬಳ್ಳಿ ಮತ್ತು ಸುತ್ತಲಿನ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದು, ಸತತ ಎರಡು ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಧಾರಾಕಾರ ಮಳೆಯಿಂದಾಗಿ ಮಳೆಯ ರಭಸಕ್ಕೆ ರಸ್ತೆಯ ಮೇಲೆಯೂ ನೀರು ಹರಿದಿದೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವರುಣನ ಆರ್ಭಟ

ಕೆಲವೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿವೆ. ಎರಡು ವಾರಗಳಿಗೂ ಹೆಚ್ಚು ದಿನಗಳಿಂದ ಮಳೆ ಬಂದಿರಲಿಲ್ಲ. ಏಕಾಏಕಿ ಸುರಿದ ಮಳೆಯಿಂದ ಕೃಷಿ ಭೂಮಿಗೆ ಅನುಕೂಲವಾಗಿದೆ.‌ ಹುಬ್ಬಳ್ಳಿಯಲ್ಲಿ ತಂಪಾದ ವಾತಾವರಣವೂ ನಿರ್ಮಾಣವಾಗಿದೆ

Share News

About admin

Check Also

Featured Video Play Icon

ಹೆಣದ ಮೇಲಿನ ರಾಜಕೀಯ ಸರಿಯಲ್ಲ: ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಜೋಶಿ ಚಾಟಿ..!

ಹುಬ್ಬಳ್ಳಿ: ಗುಪ್ತಚರ ಇಲಾಖೆಯು ಬಹುದೊಡ್ಡ ಪ್ರಶಂಸೆಯ ಕೆಲಸವನ್ನು ಮಾಡಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಹೆಣಗಳ ಮೇಲೆ ರಾಜಕೀಯ ಮಾಡುವಂತ …

Leave a Reply

Your email address will not be published. Required fields are marked *

You cannot copy content of this page