ಹುಬ್ಬಳ್ಳಿ : ಅವಳಿ ನಗರದ ಬೀದಿಬದಿ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ನೂತನ ಆಯುಕ್ತರಾದ ಗೋಪಾಲಕೃಷ್ಣ ಬಿ. ಅವರನ್ನು ಭೇಟಿ ಮಾಡಿ ಶುಭಕೋರಲಾಯಿತು. ಬೆಂಗೇರಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣವಾದ ಮಾರುಕಟ್ಟೆ ಪ್ರಾರಂಭಿಸಲು, ಬೀದಿಬದಿ ವ್ಯಾಪಾರಿಗಳ ಸರ್ವೆ ನೋಂದಣಿ ಮಾಡುವುದು ಸೇರಿದಂತೆ ಬೇಡಿಕೆಗಳ ಮನವಿಯನ್ನು ನೀಡಲಾಯಿತು.
ಸಂಘದ ಗೌರವಾಧ್ಯಕ್ಷ ಅಮೃತ ಇಜಾರಿ, ಅಧ್ಯಕ್ಷರಾದ ಹುಲಿಗೆಮ್ಮ ಚಲವಾದಿ, ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಟೌನ್ ವೆಂಡರ್ ಕಮಿಟಿ ಸದಸ್ಯರಾದ ಅನ್ನಪೂರ್ಣ ಕುಂಕೂರಮಠ, ಕಸ್ತೂರಿ ದಾಸರ ಮುಂತಾದವರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

