ಚಿಕ್ಕಮಗಳೂರು: ವಿವಾಹಿತೆ ಮತ್ತು ಯುವಕನ ಪ್ರೇಮ ಸಾವಿನಲ್ಲಿ ಅಂತ್ಯ ಕಂಡಿದೆ. ಬೆಂಗಳೂರಿನ 36 ವರ್ಷದ ಲತಾ ಮತ್ತು ಹೊಸದುರ್ಗ ತಾಲೂಕು ಬೆಲಗೂರಿನ ಲಕ್ಷ್ಮಿಕಾಂತ್(31) ಮೃತಪಟ್ಟವರು ಘಟನೆ ನಡೆದಿದೆ.
15 ದಿನಗಳ ಹಿಂದೆ ಲಕ್ಷ್ಮಿಕಾಂತ್ ಊರಿಗೆ ಬಂದಿದ್ದಾನೆ. ಗಂಡನೊಂದಿಗೆ ಜಗಳ ಮಾಡಿಕೊಂಡ ಲತಾ ತವರು ಮನೆಗೆ ಹೋಗಿದ್ದಾರೆ.ಫೆ. 7ರಂದು ಲಕ್ಷ್ಮಿಕಾಂತ್ ಮತ್ತು ಲತಾ ಧರ್ಮಸ್ಥಳಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬಂದಿದ್ದಾರೆ. ಬುಧವಾರ ಕಡೂರು ತಾಲೂಕಿನ ಯಗಟಿಪುರ ಮಲ್ಲಿಕಾರ್ಜುನ ಸ್ವಾಮಿ ದೇಗುಲದ ಸಮೀಪದ ವೇದಾವತಿ ನದಿಯ ಚೆಕ್ ಡ್ಯಾಂ ಬಳಿ ಬ್ಯಾಗ್ ಗಳು ಕಂಡುಬಂದಿವೆ.
ನೀರಿನಲ್ಲಿ ಮಹಿಳೆಯ ಶವ ತೇಲುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಯಗಟಿ ಠಾಣೆ ಪೊಲೀಸರು ಮೃತದೇಹವನ್ನು ಹೊರಗೆ ತೆಗೆದು ದೂರವಾಣಿ ಸಂಖ್ಯೆ ಪರಿಶೀಲಿಸಿ ಪತಿಗೆ ಮಾಹಿತಿ ನೀಡಿದ್ದಾರೆ. ಮರುದಿನ ಮುಳುಗು ತಜ್ಞ ಮಲ್ಪೆಯ ಈಶ್ವರ್ ಕರ್ಕೆರಾ ಅವರನ್ನು ಕರೆಸಿ ಲಕ್ಷ್ಮಿಕಾಂತ್ ಮೃತದೇಹ ಹೊರ ತೆಗೆದಿದ್ದು, ಸಂಬಂಧಿಕರಿಗೆ ಇಬ್ಬರ ಮೃತದೇಹ ಹಸ್ತಾಂತರ ಮಾಡಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

