ಹುಬ್ಬಳ್ಳಿ : ಅಂಗವಿಕಲ ಇದ್ದರೂ ಇವರ ಸಾಧನೆಗೆ ಏನ್ನು ಕಮ್ಮಿ ಇಲ್ಲಾ. ಸಾಧನೆ ಮಾಡಬೇಕು ಎಂಬ ಛಲ ವಿದ್ದರೆ ಎಂತಹ ಕಷ್ಟ ಬಂದರೂ ಗುರಿಯನ್ನು ಮುಟ್ಟುಲು ಸಾಧ್ಯವಾಗುತ್ತದೆ. ಇಂತಹ ಸೂಕ್ತ ಉದಾಹರಣೆ ನಮ್ಮ ಹುಬ್ಬಳ್ಳಿ ಮಹಮ್ಮದ್ ಜಾವೇದ್ ಸಾಕ್ಷಿ. 2009 ರಲ್ಲಿ ನೇಪಾಳದ ವಿರುದ್ಧ ಭಾರತ ತಂಡದಲ್ಲಿ ಜಾವೇದ್ ಆಟವನ್ನು ಆಡಿದ್ದು, ಇದೀಗ ಬಾಂಗ್ಲಾ ದೇಶದ ಢಾಕಾದಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯದಲ್ಲಿ ಆಟವನ್ನು ಮುಂದುವರೆಸಲು ತಯಾರು ಆಗಿದ್ದಾರೆ.
ನಗರದ ನೂರಾನಿ ಪ್ಲಾಟ್ ನಿವಾಸಿ ನಲ್ಲಿ ಮಹಮ್ಮದ್ ಜಾವೇದ್ ವಾಸವಾಗಿದ್ದಾರೆ. ದಿವ್ಯಾಂಗ ಕ್ರಿಕೆಟ್ ಕಂಟ್ರೋಲ್ ಆಫ್ ಇಂಡಿಯಾ ಜಾವೇದ್ ರನ್ನು ಆಯ್ಕೆ ಮಾಡಿದೆ. ಜಾವೇದ್ ನಗರದ ಕಾರವಾರ ರಸ್ತೆಯಲ್ಲಿ ಎಂ.ಜೆ. ಕ್ರಿಕೆಟ್ ಅಕಾಡೆಮಿ ಸ್ಥಾಪಿಸಿ ಬಡ ಯುವಕರಿಗೆ ಕ್ರಿಕೆಟ್ ತರಬೇತಿ ನೀಡುತ್ತಾ ತಾವೂ ಕ್ರಿಕೆಟ್ ನಲ್ಲಿ ಮೇಲುಗೈ ಸಾಧಿಸುತ್ತಿದ್ದಾರೆ .
ಮಾ .27 ರಿಂದ ಬಾಂಗ್ಲಾ ದೇಶದ ಢಾಕಾದಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯದಲ್ಲಿ ಭಾಗಿಯಾಗಲಿದ್ದಾರೆ. ಬಾಂಗ್ಲಾದೇಶ , ನೇಪಾಳ , ಇಂಗ್ಲೆಂಡ್ , ಹಾಗೂ ಭಾರತ ತಂಡಗಳ ಮಧ್ಯ ಪಂದ್ಯ ನಡೆಯಲಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

