ನವಲಗುಂದ : ವರುಣನ ಆರ್ಭಟಕ್ಕೆ ರೈತರು ಕಂಗಾಲು ಆಗಿದ್ದಾರೆ. ಕುರಿ ಮೇಯಿಸುತ್ತಿದ್ದ ಕುರಿಗಾಯಿಗಳಿಗೆ ಮತ್ತು ಕುರಿಗಳಿಗೆ ಸಿಡಿಲು ಬಡಿದ ಪರಿಣಾಮ ಕುರಿಗಾಯಿಗಳು ಗಂಭೀರವಾಗಿ ಗಾಯಗೊಂಡಿದ್ದು , ಸ್ಥಳದಲ್ಲೇ 15 ಕುರಿಗಳು ಮೃತಪಟ್ಟಿರುವ ಘಟನೆ ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದ ಹೊಲದಲ್ಲಿ ನಡೆದಿದೆ.
ಸುರಿಯುತ್ತಿದ್ದ ಬಾರಿ ಮಳೆಯಿಂದ ತಪ್ಪಿಸಿಕೊಳ್ಳಲು ಮರದ ಕೆಳಗೆ ಕುರಿಗಳೊಂದಿಗೆ ನಿಂತ ಸಂದರ್ಭದಲ್ಲಿ ಈ ಅನಾಹುತ ಸಂಭವಿಸಿದೆ.ತಾಲ್ಲೂಕಿನ ಗೊಬ್ಬರಗುಪ್ಪಿ ಗ್ರಾಮದ ಸಹೋದರರಾದ 18 ವರ್ಷ ವಯಸ್ಸಿನ ದೇವರಾಜ ದ್ಯಾಮಪ್ಪ ಪೂಜಾರ ಹಾಗೂ ಕರಿಯಪ್ಪ ದ್ಯಾಮಪ್ಪ ಪೂಜಾರ . ಇನ್ನು ದೇವರಾಜ ದ್ಯಾಮಪ್ಪ ಪೂಜಾರ ಎಂಬುವವರಿಗೆ ಗಂಭೀರ ಗಾಯವಾಗಿದ್ದು , ಇಬ್ಬರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

