Breaking News

ಬೂದನಗುಡ್ಡ ಬಸವಣ್ಣ ದೇವಸ್ಥಾನದಲ್ಲಿ ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು

ಹುಬ್ಬಳ್ಳಿ; ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಶ್ರೀ ಕ್ಷೇತ್ರ ಬೂದನಗುಡ್ಡ ಬಸವಣ್ಣ ದೇವಸ್ಥಾನದಲ್ಲಿ ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಶ್ರೀ ಕ್ಷೇತ್ರ ಬೂದನಗುಡ್ಡ ಬಸವಣ್ಣ ದೇವಸ್ಥಾನ ಸಮಿತಿ ವತಿಯಿಂದ ಧಾರವಾಡದ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.

ಶ್ರೀ ಕ್ಷೇತ್ರ ಬೂದನಗುಡ್ಡವು ಪುರಾತನವಾದ ರಮಣೀಯವಾದ ಉನ್ನತ ಗಿರಿ ಶಿಖರ ವನಸಿರಿಗಳಿಂದ ಕೂಡಿದ ಪ್ರವಾಸಿ ತಾಣವಾಗಿದ್ದು, ಶ್ರೀ ಕ್ಷೇತ್ರ ಉಳಿವಿಯ ಹೆಬ್ಬಾಗಿಲು ಎಂದೇ ಪ್ರಖ್ಯಾತಿ ಪಡೆದಿದೆ.

ಈ ನಿಟ್ಟಿನಲ್ಲಿ ಪ್ರತಿ ಶ್ರಾವಣ ಮಾಸದಂದು ಪ್ರತಿ ಸೋಮವಾರ ಹಾಗೂ ಗುರುವಾರ ಒಂದು ತಿಂಗಳ ಕಾಲ ಜಾತ್ರಾಮಹೋತ್ಸವ ನಡೆಯುತ್ತದೆ. ದೇವಸ್ಥಾನದ ಹೆಚ್ಚಿನ ಅಭಿವೃದ್ಧಿ ಉಳಿದಿರುವುದರಿಂದ ಶ್ರೀ ಕ್ಷೇತ್ರ ಬೂದನಗುಡ್ಡಕ್ಕೆ ಬರುವ ಭಕ್ತಾದಿಗಳಿಗೆ ಅಗತ್ಯ ಸೌಕರ್ಯಗಳಿಲ್ಲದೇ ತೊಂದರೆ ಅನುಭವಿಸುವಂತಾಗಿದೆ. ಈ ನಿಟ್ಟಿನಲ್ಲಿ ದೇವಸ್ಥಾನದಲ್ಲಿ ಅಗತ್ಯವಿರುವ ಅಭಿವೃದ್ಧಿ ಕಾರ್ಯಗಳನ್ನು ತುರ್ತಾಗಿ ಈಡೇರಿಸಬೇಕು ಎಂದು(ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಅವರ ಪ್ರತಿನಿಧಿಯವರಿಗೆ) ಕೋರಲಾಯಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಬೂದನಗುಡ್ಡ ಬಸವಣ್ಣ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಈರಪ್ಪ ಕೆ ಎಮ್ಮಿ, ಮಂಜುನಾಥ ಲೂತಿಮಠ, ಮಹಾಂತೇಶ ಗಿರಿಮಠ, ಮಹಾಂತೇಶ ಹಾದಿಮನಿ, ಸುರೇಶ್ ಧ್ಯಾಮಣ್ಣವರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Share News

About BigTv News

Check Also

ಕಮಿಷನರ್ ಖದರ್‌ಗೆ ಕ್ರಿಮಿನಲ್‌ಗಳಿಗೆ ನಡುಕ..! ಸಾಹೇಬರೇ ಫುಲ್ ಅಲರ್ಟ್ — ಖಾಕಿ ಮೇಲೆ ಕಲೆ ಬೀಳದಂತೆ ಕಠಿಣ ಕಾವಲು!

ರೌಡಿಗಳಿಂದ ಅಂತರ..! ಡ್ರಗ್ಸ್ ಪೆಡ್ಲರ್‌ಗಳಿಗೆ ನೋ ಎಂಟ್ರಿ — ಕ್ರಿಮಿನಲ್‌ಗಳಿಂದ ಖಾಕಿ ದೂರವಿದ್ದರೆ ಪೊಲೀಸ್ ಇಲಾಖೆ ಇನ್ನಷ್ಟು ಕ್ಲೀನ್..! ಖಾಕಿ …

Leave a Reply

Your email address will not be published. Required fields are marked *