ಉಡಸಂತೋಷ್ ಪಾಟೀಲ್ ಆತ್ಮಹತ್ಯೆಗೂ ಮುನ್ನಾ ಮೋನೋಸಿಲ್ ಎಂಬ ಕೀಟನಾಶಕವನ್ನು ಜೂಸ್ ಗೆ ಬೆರೆಸಿ ಕುಡಿದಿರುವ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ಉಡುಪಿಯ ಲಾಡ್ಜಿನ ಕಸದ ತೊಟ್ಟಿಯಲ್ಲಿ ವಿಷದ ಬಾಟಲಿಯೊಂದನ್ನು ಪೊರೆನ್ಸಿಕ್ ತಜ್ಞರು ಪತ್ತೆ ಹಚ್ಚಿದ್ದಾರೆ. ಜೊತೆಗೆ ಅದನ್ನು ವಶಪಡಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
ಲಾಡ್ಜ್ ನಲ್ಲಿ ಪತ್ತೆಯಾದ ಬಾಟಲ್ ಮೋನೊಸಿಲ್ ಎಂಬುದಾಗಿ ತಿಳಿದು ಬಂದಿದೆ. ಇದು ಗಿಡಗಳಿಗೆ ಹುಳ ಬಾಧೆ ತಡೆಯಲು ಬಳಸಲಾಗುವ ಮೋನೊಸಿಲ್ ಎಂಬ ಕೀಟನಾಶಕ. ಇದನ್ನು ಜೂಸ್ ನಲ್ಲಿ ಬೆರೆಸಿ ಸಂತೋಷ್ ಕುಡಿದಿದ್ದರೇ ಅಥವಾ ಅವರಿಗೆ ಕುಡಿಸಲಾಗಿತ್ತೇ ಎಂಬ ನಿಟ್ಟಿನಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

