Breaking News

ಶಿಕ್ಷಕರ ಚುಣಾವಣೆಗೆ ನಾನು ಪ್ರಭಲ ಆಕಾಂಕ್ಷಿ: ದೇಶಪಾಂಡೆ

ಹುಬ್ಬಳ್ಳಿ: ಜೂನ್ 2022 ರಲ್ಲಿ ನಡೆಯುವ ಕರ್ನಾಟಕ ಪಶ್ಷಿಮ ಶಿಕ್ಷಕರ ಮತಕ್ಷೇತ್ರಕ್ಕೆ ಚುಣಾವಣೆಗೆ ಭಾರತೀಯ ಜನಾತಾ ಪಾರ್ಟಿ ಯ ವತಿಂಯಿಂದ ನಾನು ಚುಣಾವಣೆಗೆ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿದ್ದನೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸುಧೀದ್ರ ದೇಶಪಾಂಡೆ ಹೇಳಿದರು..

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಮೂವತ್ತು ವರ್ಷಗಳಿಗಿಂತ ಹೆಚ್ಚಿನ ಕಾಲ ನಾನು ಶಿಕ್ಷಕರ ಕುಂದು ಕೋರತೆಗಳಿಗಾಗಿ ಹೋರಾಟ ಮಾಡಿದ್ದೆನೆ, ಮತ್ತು ಕಳೆದ 35 ವರ್ಷ ಗಳಿಂದ ಸಂಘ ಪರಿವಾರದ ವಿವಿಧ ಸಂಘಟನೆಗಳಲ್ಲಿ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೆನೆ ಈ ಕಾರಣ ಬಿಜೆಪಿ ಯ ಹೀರಿಯ ನಾಯಕರು ನನಗೆ ಚುಣಾವಣೆಗೆ ಸ್ಫರ್ಧಿಸಲು ಅವಕಾಶ ಮಾಡಿಕೊಡಬೇಕು ಎಂದು ಅವರು ಹೇಳಿದರು.
ಮುಂದುವರೆದು ಮಾತನಾಡಿದ ಅವರು ಒಂದುವೇಳೆ ಬಿಜೆಪಿಯಿಂದ ಟಿಕೇಟ ಸಿಗದೆ ಹೊದರೆ ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧಿಸುವಿರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯಿಂದ ಟಿಕೆಟ ಸಿಗುವ ನಂಬಿಕೆ ನನಗೆ ಇದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವದರ ಬಗ್ಗೆ ನಾನು ಈ ಸಂಧರ್ಬದಲ್ಲಿ ಎನು ಮಾತನಾಡುವುದಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಕವಿವಿಯ ಸಿಂಡಿಕೇಟ್ ಸದಸ್ಯರಾದ ಸದಾನಂದ ನಾಯ್ಕ, ಮತ್ತು ಪ್ರಕಾಶ ರಾಯ್ಕರ ಉಪಸ್ಥಿತರಿದ್ದರು.

Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *