ಕುಂದಗೋಳ : ತಾಲೂಕಿನ ರೊಟ್ಟಿಗವಾಡ ಗ್ರಾಮದ ಯಶೋಧಾ ಮುತ್ತಣ್ಣಭೂತರೆಡ್ಡಿ ಹಾಗೂ ಸೈನಾಜಬೇಗಂ ಮಾಬುಸಾಬ್ ಮುಲ್ಲಾ ಬಿಎಸ್ಎಫ್ ಸೈನಿಕರ ತರಬೇತಿ ಮುಗಿಸಿ ಸ್ವ ಗ್ರಾಮಕ್ಕೆ ಮರಳಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅದ್ದೂರಿ ಬರಮಾಡಿಕೊಂಡರು.
ಒಂದು ವರ್ಷದ ಬಿಎಸ್ಎಫ್ ಸೈನಿಕರು ತರಬೇತಿಯನ್ನು ಯಶಸ್ವಿಯಾಗಿ ಕೈಗೊಂಡು ರೊಟ್ಟಿಗವಾಡಕ್ಕೆ ಮರಳಿದ ಇಬ್ಬರಿಗೂ ಗ್ರಾಮಸ್ಥರು ಹೂ ಮಳೆ ಸುರಿದು ಸ್ವಾಗತ ಕೋರಿ ಸನ್ಮಾನ ಮಾಡಿದರು . ಈ ವೇಳೆ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಬಿ.ಎಸ್.ಎಫ್ ಯೋಧರಾದ ಕುಮಾರಿ ಯಶೋಧಾ ಮುತ್ತಣ್ಣಭೂತರೆಡ್ಡಿ ಹಾಗೂ ಸೈನಾಜಬೇಗಂ ಮಾಬುಸಾಬ್ ಮುಲ್ಲಾ ಅವರು ಮಹಿಳೆ ಕೇವಲ ಸೌಟು ಹಿಡಿದು ಮನೆ ನಿಭಾಯಿಸಲು ಮಾತ್ರವಲ್ಲ ಬಂದೂಕು ಹಿಡಿದು ದೇಶ ಕಾಯಲು ಸಿದ್ಧ ಎಂದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

