ನಿವೃತ್ತ ಕರ್ನಲ್ ಕೃಷ್ಣಮೂರ್ತಿ ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕೃಷ್ಣಮೂರ್ತಿ ಲಕ್ಷ್ಮೀಪುರಂ ನಿವಾಸದಲ್ಲಿ ಕೊನೆಯುಸಿರನ್ನು ಚೆಲ್ಲಿದ್ದಾರೆ.
ರಜಪೂತ್ ರೆಜಮೆಂಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸೇನಾಧಿಕಾರಿ1971ರ ಯುದ್ದದಲ್ಲಿ ಕೃಷ್ಣಮೂರ್ತಿ ಭಾಗವಹಿಸಿದ್ದರು.ಲಕ್ಷ್ಮೀಪುರಂ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಅಂತಿಮ ದರ್ಶನಕ್ಕೆ ಮೈಸೂರು ಎಕ್ಸ್ ಸರ್ವಿಸ್ ಮೆನ್ ಮೂವ್ಮೆಂಟ್ (ರಿ ) ಸಂಸ್ಥಾಪಕರಾದ ಶ್ರೀಯುತ ಮಹೇಶ್ ವಿ,ಅಧ್ಯಕ್ಷರಾದ ಶ್ರೀಯುತ ಪ್ರಿನ್ಸ್ ಮತ್ತು ಪದಾಧಿಕಾರಿಗಳು ಹಾಗೂ ಸುಮಾರು 25 ಸದಸ್ಯರು ಮೃತರಿಗೆ ಸಕಲ ಗೌರವಗಳೊಂದಿಗೆ ವಿಜಯ ಘೋಷಣೆ ಕೂಗಿ ಅಂತ್ಯಕ್ರೀಯ ಮಾಡಿದ್ದಾರೆ. ಮೃತ ಸೇನಾಧಿಕಾರಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





