ನವಲಗುಂದ : ನೂತನ ಜವಳಿ ನೀತಿಯಡಿ ಜವಳಿ ಕೈಗಾರಿಕೆಗಳ ಬೇಡಿಕೆಗಳಿಗೆ ಅನುಗುಣವಾಗಿ ತರಬೇತಿ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಕೈ ಮಗ್ಗ ಮತ್ತು ಜವಳಿ ಖಾತೆ ಸಚಿವ ಹಾಗೂ ನವಲಗುಂದ ಶಾಸಕ ಎಸ್ಪಿ ಮುನೇನಕೊಪ್ಪ ಹೇಳಿದರು .
ಈ ಕುರಿತು ಪ್ರಕಟನೆ ನೀಡಿದ ಸಚಿವರು 45 ದಿನಗಳ ಅಡ್ವಾನ್ಸ್ ಸೀವಿಂಗ್ ಮೆಷಿನ್ ಆಪರೇಟರ್ ತರಬೇತಿ ಅರ್ಹಫಲಾನುಭವಿಗಳಿಗೆ ಲಭ್ಯವಿದೆ .ಈ ಯೋಜನೆಯಡಿ ತರಬೇತಿ ಪಡೆದ ಫಲಾನುಭವಿಗಳಿಗೆ 3 , 500 ರೂಗಳ ಶಿಷ್ಯವೇತನ ಖಾತೆಗೆ ಜಮಾ ಮಾಡಲಾಗುವುದು . 2019-20ನೇ ಸಾಲಿನ ತರಬೇತಿ ಕಾರ್ಯಕ್ರಮದಡಿ 325 ತರಬೇತಿ ಸಂಸ್ಥೆಗಳಿಗೆ ಕ್ರಿಯಾ ಯೋಜನೆ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

