ಹುಬ್ಬಳ್ಳಿ: ಇಲ್ಲಿನ ಕುಸಗಲ್ ರಸ್ತೆಯ ಎಸ್ಬಿಐ ಎಟಿಎಂ ಕೇಂದ್ರದಿಂದ ಹಣ ಡ್ರಾ ಮಾಡುತ್ತಿದ್ದ ಮಧುರಾ ಕಾಲೊನಿಯ ಪುರಂದರ ಹೆಗಡೆ ಅವರಿಗೆ ಯಾಮಾರಿಸಿ, ಅವರ ಎಟಿಎಂ ಕಾರ್ಡ್ ಹಾಗೂ ಪಾಸವರ್ಡ್ ಪಡೆದ ವಂಚಕ ಅದರಿಂದ ₹88,700 ಡ್ರಾ ಮಾಡಿಕೊಂಡಿದ್ದಾನೆ.
ಪುರಂದರ ಅವರು ಎಟಿಎಂ ಕೇಂದ್ರದಿಂದ ಹಣ ಪಡೆಯುತ್ತಿರುವಾಗ, ಅಲ್ಲಿಯೇ ಪಕ್ಕದಲ್ಲಿದ್ದ ವ್ಯಕ್ತಿ ಏಕಾಏಕಿ ಯಂತ್ರದಲ್ಲಿ ಕ್ಲೋಸ್ ಬಟನ್ ಒತ್ತಿ ಅವರ ಎಟಿಎಂ ಕಾರ್ಡ್ ತಾನು ಇಟ್ಟುಕೊಂಡು ತನ್ನಲ್ಲಿರುವ ಎಟಿಎಂ ಕಾರ್ಡ್ ಅವರಿಗೆ ನೀಡಿ ಯಾಮಾರಿಸಿದ್ದಾನೆ. ನಂತರ ಬೇರೆ ಬೇರೆ ಎಟಿಎಂ ಕೇಂದ್ರಗಳಿಂದ ಐದು ಬಾರಿ ಹಣ ಡ್ರಾ ಮಾಡಿದ್ದಲ್ಲದೆ, ಕಾರ್ಡ್ ಸ್ವೈಪ್ ಮಾಡಿ ಬಂಗಾರದ ಅಂಗಡಿಯಿಂದ ಚಿನ್ನ ಸಹ ಖರೀದಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





