ತನಗೆ ಜೀವ ಬೆದರಿಕೆ ಹಾಕಿ ನಂಗ್ ಗೊತ್ತಿಲ್ಲದೇ ತನ್ನ ಗಂಡನಿಗೆ ಮದುವೆ ಬೇರೆ ಮಾಡಿಸಿದ್ದಾರೆಂದು ಧಾರವಾಡದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರ ಪರಿಣಾಮ , ಪಾಲಿಕೆ ಮಾಜಿ ಸದಸ್ಯ ಸೇರಿದಂತೆ 17 ಜನರ ಮೇಲೆ ಎಫ್ಐಆರ್ ದಾಖಲಾಗಿದೆ.
ಬೆಳಗಲಿ ಗ್ರಾಮದಲ್ಲಿ ಮದುವೆಯಾಗಿದ್ದ ಮಹಿಳೆಯೇ ದೂರು ದಾಖಲು ಮಾಡಿದ್ದು , ಇದರಲ್ಲಿ ಪಾಲಿಕೆ ಸದಸ್ಯಶಿವಾನಂದ ಮುತ್ತಣ್ಣನವರ ಐದನೇಯ ಆರೋಪಿಯಾಗಿದ್ದಾರೆ . ಸಂತೋಷ @ ಕೆಂಚಪ್ಪ ಇವರು ಮರು ಮದುವೆಯಾಗಲು ಸಹಕಾರ ನೀಡಿರುವ ಆರೋಪವೂ ಇದೆ . ಅಷ್ಟೇ ಅಲ್ಲದೇ , ತನಗೆ ಮಕ್ಕಳಾಗಿಲ್ಲ ಅನ್ನೋ ಕಾರಣಕ್ಕೆ ಹೀಗೆಲ್ಲ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

