Breaking News

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ರಾಷ್ಟ್ರಭಕ್ತಿಯ ಕಿಚ್ಚು ಹೊತ್ತಿಸಿದ್ದರು : ರಜತ ಉಳ್ಳಾಗಡ್ಡಿಮಠ


ಹುಬ್ಬಳ್ಳಿ: ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಖಾದಿ ಮತ್ತು ಚರಕದ ಮೂಲಕ ದೇಶವಾಸಿಗಳಲ್ಲಿ ರಾಷ್ಟ್ರಭಕ್ತಿಯ ಕಿಚ್ಚು ಹೊತ್ತಿಸಿದ್ದರು. ಆದರೆ, ಹಾಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಖಾದಿಯಿಂದ ತಯಾರಿಸಲ್ಪಡುತ್ತಿರುವ ತಿರಂಗಾ ಕಡೆಗಣಿಸಲು ಮುಂದಾಗುವ ದೇಶ ಪ್ರೇಮದ ಪ್ರತೀಕವಾಗಿರುವ ಖಾದಿ ಹಾಗೂ ಇದನ್ನೇ ನಂಬಿಕೊಂಡಿರುವ ಸಾವಿರಾರು ಕುಟುಂಬಗಳನ್ನು ಬೀದಿ ತಳ್ಳಲು ಮುಂದಾಗಿದೆ ಎಂದು ವಿದ್ಯಾನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಆರೋಪಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾದಿ ಹಾಗೂ ಚರಕದಿಂದಲೇ ಗಾಂಧಿಜಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದರು. ಕೇಂದ್ರ ಸರ್ಕಾರ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ದ ಅಂಗವಾಗಿ ಹರ್ ಘರ್ ತಿರಂಗಾ ಅಭಿಮಾನದಡಿ ದೇಶದ ಪ್ರತಿಯೊಬ್ಬರ ಮನೆಯಲ್ಲಿ ಪಾಲಿಸ್ಟರ್ ಧ್ವಜ್ ಗಳನ್ನು ಹಾರಿಸಲು ನಿರ್ಧರಿಸಿದ್ದು ದೇಶ ಪ್ರೇಮಿಗಳಿಗೆ ಮಾತ್ರವಲ್ಲದೇ ಖಾದಿಯನ್ನೇ ನಂಬಿ ಬದುಕುಕಟ್ಟಿಕೊಂಡಿರುವ ಕುಟುಂಬಗಳಿಗೆ ಅವಸಾನದ ಅಂಚಿಗೆ ತಂದು ನಿಲ್ಲಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ, ಧ್ವಜ್ ನೀತಿ ಸಂಹಿತೆ 2002 ಕ್ಕೆ ತಿದ್ದುಪಡಿ ತಂದು ಪಾಲಿಸ್ಟರ್ ಧ್ವಜ್ ಬಳಿಕೆಗೆ ಅನುಮತಿ ನೀಡಿದೆ. ಸರ್ಕಾರದ ಈ ನಿರ್ಧಾರದಿಂದ 30 ಸಾವಿರ ಕುಟುಂಬಗಳ ಒಪ್ಪತ್ತಿನ ಗಂಜಿಗೆ ಸಂಚಕಾರ ತಂದೊಡಲಿದೆ ಎಂದೂ ರಜತ ಆಕ್ರೋಶ ವ್ಯಕ್ತಪಡಿಸಿದರು. ಮೇಕ್ ಇನ್ ಇಂಡಿಯಾ ಮೂಲಕ ಕೇಂದ್ರ ಸರ್ಕಾರ ದೇಸಿಯ ಉತ್ಪನಗಳ ತಯಾರಿಕೆ ಹಾಗೂ ಬಳಕೆಗೆ ಆದ್ಯತೆ ನೀಡಿದೆ. ಆದರೆ, ಇನ್ನೊಂದೆಡೆ ಪಾಲಿಸ್ಟರ್ ಧ್ವಜ್ ಗಳ ಬಳಕೆಗೆ ಅನುಮತಿ ನೀಡಲು ನಿರ್ಧರಿಸುವ ಮೂಲಕ ರಾಷ್ಟ್ರಪ್ರೇಮಿಗಳ ಆಕ್ರೋಶಕ್ಕೆ ಗುರಿಯಾಗಿದೆ.

ಮಾತ್ತೇತ್ತಿದರೇ, ದೇಶಪ್ರೇಮ, ರಾಷ್ಟ್ರ ಭಕ್ತಿಯ ಜಪ ಮಾಡುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬಿಜೆಪಿ ನಾಯಕರು ಇದರ ವಿರುದ್ದ ತುಟಿಪಿಟಿಕ್ ಎನ್ನದಿರುವುದು ಅವರಲ್ಲಿನ ದೇಶಪ್ರೇಮ ಹಾಗೂ ರಾಷ್ಟ್ರ ಭಕ್ತಿ ಎಂತಹದ್ದು ಎಂಬುದು ಎತ್ತಿ ತೋರಿಸುತ್ತದೆ ಎಂದರು.

ಹುಬ್ಬಳ್ಳಿ ಯ ಬೆಂಗೇರಿ ಖಾದಿಗ್ರಾಮದ್ಯೋಗದಿಂದ ಈವರೆಗೂ ರಾಷ್ಟ್ರದ ರಾಜಧಾನಿ ದೆಹಲಿಯ ಕೆಂಪುಕೋಟೆ ಮೇಲೆ ಹಾರಿಸುವ ತಿರಂಗಾ ಧ್ವಜ್ ವೂ ಸಹಾ ಇಲ್ಲಿಂದಲೇ ಖರೀದಿಸಲಾಗುತ್ತದೆ. ಕರೋನಾ ಮಹಾಮಾರಿಯ ಪರಿಣಾಮ ಬೆಂಗೇರಿ ಖಾದಿಗ್ರಾಮದ್ಯೋಗ ತೀರಾ ಸಂಕಷ್ಟಕ್ಕೆ ಸಿಲುಕಿ ಅದೆಷ್ಟೋ ಕುಟುಂಬಗಳು ಒಂದು ಹೊತ್ತಿನ ಊಟಕ್ಕೆ ಪರದಾಡುವ‌ ಸ್ಥಿತಿಗೆ ತಲುಪಿದ್ದಾರೆ. ವರ್ಷಕ್ಕೆ ಕೇವಲ 2 ಬಾರಿ ಮಾರಾಟವಾಗುವ ರಾಷ್ಟ್ರ ಧ್ವಜ್ ವನ್ನೇ ನಂಬಿರುವ ನೇಕಾರರು, ಇಡೀ ವರ್ಷ ಇದೇ ಭರವಸೆಯಲ್ಲೇ ಕಾಲ ಕಳೆಯುತ್ತಾರೆ. ಸರ್ಕಾರದ ಈ ದಿಢೀರ್ ನಿರ್ಧಾರ ನೇಕಾರರ ಬದುಕಿಗೆ ಕೊಳ್ಳೆಯಿಟ್ಟಿದೆ ಎಂದು ರಜತ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ತಕ್ಷಣ ಈ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು ಹಾಗೂ ಖಾದಿ ಧ್ವಜ್ ಹಾಗೂ ಖಾದಿ ಬಟ್ಟೆ ತಯಾರಿಕೆ ಮತ್ತು ಮಾರಾಟಕ್ಕೆ ಉತ್ತೇಜನ ನೀಡುವ ಮೂಲಕ ನೇಕಾರರ ಬದುಕು ಹಸನಾಗಿಸಬೇಕು ಎಂದೂ ಅವರು ಒತ್ತಾಯಿಸಿದರು.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *