Breaking News

ರೈತರ ಆರೋಗ್ಯ ಮತ್ತು ಸಬಲತೆಗೆ ಹೈನುಗಾರಿಕೆ ಆರ್ಥಿಕ ಸಹಕಾರಿಯಾಗಿದೆ : ಶಾಸಕ ಸಿ.ಎಂ. ನಿಂಬಣ್ಣವರ

ಕಲಘಟಗಿ :  ರೈತರ ಆರೋಗ್ಯ ಮತ್ತು ಸಬಲತೆಗೆ ಹೈನುಗಾರಿಕೆ ಆರ್ಥಿಕ ಸಹಕಾರಿಯಾಗಿದೆ. ಹೈನುಗಾರಿಕೆ ಮಾಡಲು ಗ್ರಾಮೀಣ ಸಶಕ್ತರಾಗಿದ್ದು , ಮಹಿಳೆಯರು ವೈಜ್ಞಾನಿಕವಾಗಿ ಹೈನುಗಾರಿಕೆಯನ್ನು ಉದ್ದಿಮೆಯನ್ನಾಗಿ ಸಿಕೊಂಡಲ್ಲಿ ಆರ್ಥಿಕ ಸಬಲೀಕರಣವಾಗಲಿದೆ  ಎಂದು ಶಾಸಕ ಸಿ.ಎಂ. ನಿಂಬಣ್ಣವರ ಹೇಳಿದರು.

ತಾಲೂಕಿನ ದಾಸ್ತಿಕೊಪ್ಪ ಗ್ರಾಮದಲ್ಲಿ  ಹಾಲು ಉತ್ಪಾದಕರ  ಸಹಕಾರಿ ಸಂಘದ ನೂತನ ಹಾಲು ಕೇಂದ್ರದ ಕಟ್ಟಡಕ್ಕೆ ಸಂಸ್ಕರಣಾ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ಮಾತನಾಡಿ , ದಾಸ್ತಿಕೊಪ್ಪದಲ್ಲಿರುವ ಸಹಕಾರಿ ಸಂಘಕ್ಕೆ 27 ಲಕ್ಷ ರೂ . ವೆಚ್ಚದಲ್ಲಿ ನಿರ್ಮಿಸಲಿರುವ ಒಟ್ಟು 3 , 000 ಲೀಟರ್ ಸಾಮರ್ಥ್ಯದ ಹಾಲು ಸಂಸ್ಕರಣಾ ಕೇಂದ್ರ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಬಿಎಂಸಿ ಕಟ್ಟಡಕ್ಕೆ ಶಾಸಕ ಸಿ.ಎಂ.ನಿಂಬಣ್ಣವರ ಭೂಮಿಪೂಜೆ ನೆರವೇರಿಸಿದರು. ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ , ನಿರ್ದೇಶಕಿ ಗೀತಾ ಮರಲಿಂಗಣ್ಣವರ , ಹನುಮಂತಗೌಡ ತಳಬಾಗಿಲು ಇತರರಿದ್ದರು

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *