ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಡಾ. ಈಶ್ವರ ಉಳ್ಳಾಗಡ್ಡಿ ಅವರು ಇಂದು ತಮ್ಮ ಆಸನವನ್ನು ಅಲಂಕಾರ ಮಾಡಿದ್ದಾರೆ. ಡಾ ಈಶ್ವರ ಉಳ್ಳಾಗಡ್ಡಿ ಕೆಎಎಸ್ ಹಿರಿಯ ಅಧಿಕಾರಿಯಾಗಿದ್ದು, ಪಾಲಿಕೆಯ ನೂತನ ಆಯುಕ್ತರಾಗಿ ಬಡ್ತಿ ಪಡೆದು ಅಧಿಕಾರ ವಹಿಸಿಕೊಂಡರು. ಹುಬ್ಬಳ್ಳಿಯ ಪಾಲಿಕೆಯ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದು, ಕಚೇರಿಗೆ ಬರುತ್ತಿದ್ದಂತೆ ನೂತನ ಆಯುಕ್ತರನ್ನು ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ವಾಗತಿಸಿದರು. ಸರಳವಾಗಿ ಕಚೇರಿಯಲ್ಲಿ ನೂತನ ಆಯುಕ್ತರು ಅಧಿಕಾರ ಸ್ವೀಕಾರ ಮಾಡಿದರು. ಈ ಹಿಂದೆ ಅಧಿಕಾರದಲ್ಲಿ ಇದ್ದ ಗೋಪಾಲಕೃಷ್ಣ ಅವರ ವರ್ಗಾವಣೆ ನಂತರ ಖಾಲಿಯಾಗಿದ್ದ ಜಾಗೆಯಲ್ಲಿ ಭರತ್ ಎಸ್ ಅವರು ಹಾಲಿ ಪಾಲಿಖೆ ಆಯುಕ್ತರಾಗಿ ಅಧಿಕಾರದಲ್ಲಿ ಇದ್ದರು ಈ ನಂತರದಲ್ಲಿ ಈಶ್ವರ ಉಳ್ಳಾಗಡ್ಡಿ ಅವರಿ ಅಧಿಕಾ ಸ್ವೀಕಾರ ಮಾಡಿದ್ದಾರೆ. ಹೊಸದಾಗಿ ಅಧಿಕಾರ ಸ್ವೀಕಾರ ಮಾಡಿದ ಆಯುಕ್ತರು ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಖೆಯನ್ನು ಯಾವ ರೀತಿಯಲ್ಲಿ ಉದ್ಧಾರ ಮಾಡುತ್ತಾರೆ ಎನ್ನುವದನ್ನು ಕಾದು ನೋಡಬೇಕಾದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





