ಗದಗ;- ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹದ ಭೀತಿ ಶುರುವಾಗಿದೆ. ಹೀಗಾಗಿ ನದಿ ದಡದ ಗ್ರಾಮಗಳಿಗೆ ಪ್ರವಾಹದ ಆತಂಕ ಶುರುವಾಗಿದೆ.
ಮಲಪ್ರಭಾ ನದಿಯ ದಡದ ಗ್ರಾಮಗಳಲ್ಲಿ ಧ್ವನಿವರ್ದಕ ಮೂಲಕ ಪ್ರವಾಹದ ಬಗ್ಗೆ ಎಚ್ಚರಿಕೆ ನೀಡಲಾಗಿದ್ದು, ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ಸಾರ್ವಜನಿಕರಿಗೆ ಗ್ರಾಮ ಪಂಚಾಯತಿ ಹಾಗೂ ಪೋಲೀಸ್ ಇಲಾಖೆ ಎಚ್ಚರಿಕೆ ನೀಡಿದ್ದಾರೆ.
ಮಲಪ್ರಭಾ ನದಿಯಲ್ಲಿ ದಿನದಿನೇ ನೀರನ ಮಟ್ಟ ಹೆಚ್ಚಾಗ್ತಿದೆ ನದಿಗೆ ಹೋಗಬಾರದು. ಬಟ್ಟೆ ತೊಳೆಯಲು ಹಾಗೂ ಜಾನುವಾರುಗಳನ್ನೂ ಬಿಡಬಾರದು. ಬೆಣ್ಣೆ ಹಳ್ಳದ ನೀರು ಹಾಗೂ ಮಳೆ ಹೆಚ್ಚಾಗ್ತಿರೋ ಕಾರಣ ಮಲಪ್ರಭಾ ನದಿ ನೀರಿನ ಮಟ್ಟ ಏರಿಕೆ ಆಗಿದ್ದು, ಸ್ವಲ್ಪ ಜಾಗರೂಕತೆಯಿಂದ ಇರುವಂತ ಎಚ್ಚರಿಕೆ ನೀಡಲಾಗಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news





