ಪೊಲೀಸ್ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಎರವಲು ಸೇವೆಯ ಅವಧಿಗೆ ಮಿತಿ ಹೇರಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಶೋಕ್ ಮೋಹನ್ ಆದೇಶ ಹೊರಡಿಸಿದ್ದಾರೆ.ಇನ್ನು ಮುಂದೆ ಈ ಅವಧಿ ಮೂರು ವರ್ಷ ಮೀರುವಂತಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದ್ದು ಸರ್ಕಾರದ ಸೂಚನೆಯಂತೆ ಹೊಸ ಮಾರ್ಗ ಸೂಚಿ ಜಾರಿ ಬಂದಿದೆ.
ಎರವಲು ಸೇವೆಯ ಸಾಮಾನ್ಯ ಅವಧಿ ಮೂರು ವರ್ಷ ಪೂರ್ಣಗೊಂಡ ಬಳಿಕ ವಿಶೇಷ ಸಂದರ್ಭ ಅಥವಾ ವಿಶೇಷ ಕಾರಣ ಇದ್ದರೆ ಮಾತ್ರ ಸೀಮಿತ ಸಾಮಾನ್ಯ ಅವಧೀಯನ್ನು ಪೊಲೀಸ್ ಪ್ರಧಾನ ಕಚೇರಿಯ ವಿಶೇಷ ಆದೇಶದ ಮೇರೆಗೆ ವಿಸ್ತರಿಸಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಲೋಕಾಯುಕ್ತ ಗುಪ್ತಚರ ದಳ ಸಿಐಡಿ ಅರಣ್ಯ ಘಟಕ ಕೆಪಿಟಿಸಿಎಲ್, ಬಿಡಿಎ, ಬಿಎಮ್ ಟಿ ಎಫ್,ಹೈಕೋರ್ಟ್ ಕೆಎಟಿಸಿ ಎಟಿಡಿಸಿ, ಆರ ಇಎಸ್ ಸಿಆರ್ ಬಿ ಸೇರಿದಂತೆ ವಿಶೇಷ ಘಟಕಗಳಿಗೆ ಪೊಲೀಸ್ ಇಲಾಖೆಯು ಎಸ್ ಐ ಹಾಗೂ ಕೆಳ ಹಂತದ ಸಿಬ್ಬಂದಿಯನ್ನು ಎರವಲು ಸೇವೆಗೆ ಬಳಸಿಕೊಳ್ಳಲಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





