ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷೆಯಾಗಿ ಶೋಭಾ ಕರಂದ್ಲಾಜೆ ಹೆಸರು ಚರ್ಚೆ ವಿಚಾರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅವರು ಯಾರನ್ನಾದರೂ ಬೇಕಾದ್ರೂ ಅಧ್ಯಕ್ಷರನ್ನ ಮಾಡಲಿ ಪಕ್ಷದ ಅಧ್ಯಕ್ಷರ ನೇಮಕ ಬಿಡಿ ವಿರೋಧ ಪಕ್ಷದ ನಾಯಕನನ್ನೇ ಮಾಡಲಿಲ್ಲ ಕಟೀಲ್ ಅಧ್ಯಕ್ಷರಾಗಿದ್ದಾರೆ ಆಗಿರಲಿ ಐದು ತಿಂಗಳಾದ್ರೂ ವಿಪಕ್ಷ ನಾಯಕ ಮಾಡಲಿಲ್ಲ ಅಂದ್ರೆ ಹೇಗೆ ಅವರ ಪಕ್ಷದ ದೌರ್ಬಲ್ಯ ನಾನು ಹೇಳಲ್ಲಅವರು ಯಾರನ್ನಾದ್ರೂ ಮಾಡಲಿ ಅವರು ಪ್ರತಿಪಕ್ಷವಾಗಿ ನಮ್ಮನ್ನ ಜಾಗೃತಿ ಮಾಡಲಿ ತಪ್ಪೇನಿದೆ ಮಾಡಲಿ ಬಿಡಿ ಎಂದು ಹೇಳಿದರು.
ಹಾಗೆ ನಮ್ಮ ಅಕ್ಕ ಅಧ್ಯಕ್ಷರಾದ್ರೆ ಒಳ್ಳೆಯದಲ್ವೇ? ಬಿಜೆಪಿ ಕಟ್ಟಿದ್ದಾರೆ,ಕೇಂದ್ರ ಮಂತ್ರಿಯಾಗಿದ್ದಾರೆ ನಾನು ಜಾತಿ ಮೇಲೆ ಇರುವವನಲ್ಲ ನಾನು ನೀತಿ ಮೇಲೆ ರಾಜಕಾರಣ ಮಾಡುವವನು ಕುಸ್ತಿ ಎರಡು ಕಡೆ ಸರಿಸಮನಾಗಿ ಇರಬೇಕು ಆಗ ಕುಸ್ತಿ ಮಾಡೋಕೆ ಸರಿಯಾಗಿರುತ್ತದೆ ಎಂದು ವ್ಯಂಗ್ಯವಾಗಿ ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

