Breaking News

ಹೊರಗಡೆ ಸಿಎಂ ಮುಂದುವರೆಯಲ್ಲಿ ಅಂತಾ ಹೇಳಿ , ಒಳಗಡೆ ಕುಸ್ತಿ ಆರಂಭವಾಗಿದೆ : ಶೆಟ್ಟರ್

ಹುಬ್ಬಳ್ಳಿ: ಹೊರಗಡೆ ನಾವು ಎಲ್ಲರೂ ಸಿಎಂ ಸಿದ್ದರಾಮಯ್ಯನವರ ಜೊತೆಗೆ ಇದ್ದೇವೆ. ಅವರೇ ಸಿಎಂ ಆಗಿ ಮುಂದುವರೆಯಲಿ ಅಂತ ಹೇಳಿಕೆ ನೀಡುತ್ತಾರೆ. ಆದ್ರೆ, ಒಳಗಡೆ ಕುಸ್ತಿ ಆರಂಭವಾಗಿದೆ. ಇದು ಬರುವ ದಿನಗಳಲ್ಲಿ ಇನ್ನೂ ಜಾಸ್ತಿ ಆಗಲಿದೆ. ಸಿಎಂ ಆಗಲು ದೊಡ್ಡ ಲಿಸ್ಟ್ ಕ್ಯೂ ನಿಂತಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಜಗದೀಶ್ ಶೆಟ್ಟರ್ ಟೀಕೆ ಮಾಡಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಶೆಟ್ಟ‌ರ್, ಸಿಎಂ ಆಗಲು ಆರ್.ವಿ. ದೇಶಪಾಂಡೆಯವರು ಮೊದಲು ಮಾತು ಆರಂಭಿಸಿದರು. ಈಗ ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಜಿ.ಪರಮೇಶ್ವರ್ ಹೀಗೆ ದೊಡ್ಡ ಲಿಸ್ಟ್ ಕ್ಯೂ ನಿಂತಿದೆ. ಮತ್ತೊಂದು ಕಡೆ ಡಿ.ಕೆ. ಶಿವಕುಮಾ‌ರ್ ನಾನೇ ಹಕ್ಕುದಾರ ಅಂತ ಒಳಗೇ ಪ್ರಯತ್ನ ಆರಂಭಿಸಿದ್ದಾರೆ ಎಂದರು.

ಇನ್ನು ಗಣೇಶ ಪ್ರಸಾದ ವಿತರಣೆಗೆ ಕಡ್ಡಾಯ ಪರೀಕ್ಷೆ ಸರಿಯಲ್ಲ. ಬರುವ ದಿನಗಳಲ್ಲಿ ಸಾಮೂಹಿಕ ದಾಸೋಹ, ಹೋಟೆಲ್ ಗಳಲ್ಲಿ ಪರೀಕ್ಷೆ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರದ ಮಾನದಂಡಗಳನ್ನು ರಾಜ್ಯ ಸರ್ಕಾರ ಯಾವಾಗ ಸರಿಯಾಗಿ ಜಾರಿಗೊಳಿಸಿದೆ? ಹೆಸರು ಹೇಳೋದು ಕೇಂದ್ರ ಸರ್ಕಾರದ್ದು.

Share News

About Shaikh BigTv

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *