Breaking News

ಕಮಲಾಪುರ : ಪ್ರೀತಿಸಿದ್ದ ಹುಡುಗಿ ಕೈಕೊಟ್ಟ ಕಾರಣಕ್ಕೆ ಯುವಕ ಆತ್ಮಹತ್ಯೆ.!

ನಾನು ಯುವತಿಯೊಬ್ಬಳನ್ನು ಪ್ರಿತಿಸುತ್ತಿದ್ದೆ. ಬಹಳ ಸಲುಗೆಯಿಂದಿದ್ದು, ಅವಳ ಜೊತೆ ಸಂಬಂಧ ಹೊಂದಿದ್ದೆ. ಎರಡು ತಿಂಗಳೀಚೆಗೆ ನನಗೆ ಅವಳು ‘ನಾನು ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ನಮ್ಮ ಮಧ್ಯೆ ಏನೆಲ್ಲ ನಡೆದಿದೆ ಮರೆತು ಬಿಡು ಎಂದು ಹೇಳುತ್ತಿದ್ದಾಳೆ’. ನನಗೆ ಮರೆಯಲು ಆಗುತ್ತಿಲ್ಲ. ನಾನು ಬಹಳ ಡಿಪ್ರೆಶನ್‌ಗೆ ಒಳಗಾಗಿದ್ದೇನೆ, ನನಗೆ ಸಹಾಯ ಮಾಡು. ನನಗೆ ನೀನೇ ನ್ಯಾಯ ಕೊಡಿಸು ಎಂದು ಪ್ರಥಮೇಶ ತನ್ನ ಸಹೋದರಿ ವೈಷ್ಣವಿಗೆ ವಾಟ್ಸ್‌ಆಯಪ್‌ನಲ್ಲಿ ಮೆಸೇಜ್ ಮಾಡಿದ್ದ. ನಂತರ ನಾವು ಅವನ ಮೊಬೈಲ್‌ಗೆ ಕರೆ ಮಾಡಿದರೆ ಸ್ವಿಚ್ ಆಫ್ ಆಗಿತ್ತು’ ಎಂದು ಪ್ರಥಮೇಶ ತಂದೆ ಸಿದ್ಧರಾಜ ದೂರಿನಲ್ಲಿ ತಿಳಿಸಿದ್ದಾರೆ.ನೀಟ್ ಕೋಚಿಂಗ್‌ಗೆ ತೆರಳುವುದಾಗಿ ಹೇಳಿ ಮನೆಯಿಂದ ಹೋಗಿದ್ದ ವಿದ್ಯಾರ್ಥಿ ಕುರಿಕೋಟಾ ಸೇತುವೆ ಬಳಿ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದ. ಶನಿವಾರ ಸೇತುವೆ ಕೆಳಗೆ ನೀರಿನಲ್ಲಿ ಶನಿವಾರ ಬೆಳಿಗ್ಗೆ ಶವಪತ್ತೆಯಾಗಿದೆ. ಪ್ರೀತಿಸಿದ್ದ ಹುಡುಗಿ ಕೈಕೊಟ್ಟ ಕಾರಣಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ.

Share News

About BigTv News

Check Also

ಜೊಂಬಿ ಡ್ರಗ್ಸ್ ಸುಳ್ಳು ಸುದ್ದಿ, ವಿಡಿಯೋ ವೈರಲ್ ಮಾಡಿದವನನ್ನ ಅರೆಸ್ಟ್ ಮಾಡಲಾಗಿದೆ : ಜಿ.ಪರಮೇಶ್ವರ್

ಬೆಂಗಳೂರು : ಜೊಂಬಿ ಡ್ರಗ್ಸ್ ಸೇವಿಸುತ್ತಿದ್ದ ಎಂಬ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಮಿಷನರ್ ರಿಂದ ಪ್ರಕರಣದ ಬಗ್ಗೆ ಮಾಹಿತಿ …

Leave a Reply

Your email address will not be published. Required fields are marked *