ಧಾರವಾಡದಲ್ಲಿ ಮನೆ ಮನೆಗೆ ತೆರಳಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯಿಸುತ್ತಿದ್ದ ಮೂವರು ಮಹಿಳೆಯರನ್ನು ಹಿಡಿದ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಪೊಲೀಸರ ವಶಕ್ಕೆ ನೀಡಿದ್ದಾರೆ. ಧಾರವಾಡದ ಲಕ್ಷ್ಮಿಸಿಂಗನಕೆರೆಯಲ್ಲಿರುವ ರಾಜು ಪೂಜಾರ್ ಎಂಬುವವರ ಮನೆಗೆ ಬೈಬಲ್ ಹಿಡಿದುಕೊಂಡು ಹೋದ ಮಹಿಳೆಯರು ನೀವು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿ. ನಿಮ್ಮ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ನಿಮ್ಮ ಅನಾರೋಗ್ಯ ಸಮಸ್ಯೆ ಯೇಸು ನಿವಾರಿಸುತ್ತಾನೆ ಎಂದು ಒತ್ತಡ ಹೇರಿದ್ದಾರೆ. ಒತ್ತಡ ತಾಳಲಾರದೆ ರಾಜು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರ, ಬಜರಂಗದಳ ಕಾರ್ಯಕರ್ತರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಕಾರ್ಯಕರ್ತರು ಮಹಿಳೆಯರೆಯನ್ನು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ ಬಂಧಿಸಿದ್ದಾರೆ. ಆರೋಪಿ ಮಹಿಳೆಯರ ಹೆಸರು ಜಾನ್ ರಫೆಲ್, ನಾಗವೇಣಿ ರುದ್ರಪಾಟಿ, ಕಮಲಮ್ಮ ದೇವದಾಸ್, ಚೆನ್ನಮ್ಮ ದಾಸ್,ಸೀಮಿ ನಾಯಕ ಇವರ ವಿರುದ್ಧ ದೂರು ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

