ಕಾರವಾರ: ತಾಲ್ಲೂಕಿನ ಕಿನ್ನರ ಗ್ರಾಮದ ಬಳಿ ಕಾಳಿನದಿಯಿಂದ ಅಕ್ರಮವಾಗಿ ಮರಳು ತೆಗೆದು, ಸಾಗಾಟ ಮಾಡುತ್ತಿದ್ದ ಆರೋಪದಡಿ ಇಬ್ಬರ ವಿರುದ್ಧ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಸದಾಶಿವಗಡದ ಅರ್ಜುನಕೋಟ ನಿವಾಸಿ ಕಾರ್ತಿಕ್ ಗೌಡ (32), ನಂದನಗದ್ದಾದ ತೇಲಂಗ ರಸ್ತೆಯ ಅನೂಪ ಮಾಳ್ಸೇಕರ (42) ವಿರುದ್ಧ ಪ್ರಕರಣ ದಾಖಲಿಸಿದ್ದೇವೆ.ಇಬ್ಬರು ಸೇರಿ ಟಿಪ್ಪರ್ ತುಂಬ ಅಕ್ರಮವಾಗಿ ತೆಗೆದ ಮರಳನ್ನು ಸಾಗಾಟ ಮಾಡುತ್ತಿದ್ದರು. ಕಡವಾಡ ಕ್ರಾಸ್ ಬಳಿ ವಾಹನ ಸಮೇತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಗ್ರಾಮೀಣ ಠಾಣೆಯ ಎಸ್ಐ ನೇಹಾಲ ಖಾನ್ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

