ಯಾದಗಿರಿ: ಸುರಪುರ ತಾಲ್ಲೂಕಿನ ಕೆಂಭಾವಿ ಸಮೀಪದ ನಗನೂರು ಗ್ರಾಮದ ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಆರೋಪಿಯೊಬ್ಬರನ್ನು ಬಂಧಿಸಲಾಗಿದೆ. ನಗನೂರು ಗ್ರಾಮದ ನಿವಾಸಿ ಬಸವರಾಜ ಭೀಮಣ್ಣ ಬೆಳ್ಳಿ ಬಂಧಿತ ಆರೋಪಿ. ಪರಸನಹಳ್ಳಿ ಗ್ರಾಮದ ಸರ್ವೆನಂ 296ರ ಜಮೀನಿನ ಮೇಲೆ ದಾಳಿ ಮಾಡಿದ ಅಧಿಕಾರಿಗಳ ತಂಡ, 4 ಕೆ.ಜಿ.900 ಗ್ರಾಂ ಇರುವ 30 ಹಸಿ ಗಾಂಜಾ ಗಿಡಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ ಎಂದು ಯಾದಗಿರಿ ಅಬಕಾರಿ ಉಪ ಆಯುಕ್ತೆ ಶಾರದಾ ಸಿ.ಕೋಲಕಾರ ತಿಳಿಸಿದ್ದಾರೆ. ಆರೋಪಿಯ ವಿರುದ್ಧ ಎನ್ಡಿಪಿಎಸ್ ಕಾಯ್ದೆ 1985ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದಾಳಿಯಲ್ಲಿ ಸುರಪುರ ವಲಯದ ಅಬಕಾರಿ ನಿರೀಕ್ಷಕ ಕೇದಾರನಾಥ ಎಸ್.ಟಿ, ಅಬಕಾರಿ ಉಪ ನಿರೀಕ್ಷಕರಾದ ವಸಂತ ಕುಮಾರ್ಮತ್ತು, ಅನಿಲಕುಮಾರ, ಅಬಕಾರಿ ಹೆಡ್ಕಾನ್ಸ್ಟೆಬಲ್ಳಾದ ಯಮನಪ್ಪ, ಸಂಪತಕುಮಾರ ಸಂದೀಪನಾಯಕ, ವಾಹನ ಚಾಲಕ ರಮೇಶ ದೇಸಾಯಿ, ಗೃಹರಕ್ಷಕ ದಳದ ಸಿಬ್ಬಂದಿ ಹಾಜರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

