ಆಕಸ್ಮಿಕವಾಗಿ ಬಾವಿಯಲ್ಲಿ ಮುಳುಗಿ ತಾಯಿ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕಿನ ತಿಪ್ಪೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ತಾಯಿ ವಿಜಯಾ (30) ಮಗ ಅಜಯ್ (10) ಮತ್ತು ಮಗಳು ಧನಲಕ್ಷ್ಮಿ (8) ಮೃತರು ಎಂದು ಗುರುತಿಸಲಾಗಿದೆ. ಬಟ್ಟೆ ಹೊಗೆಯಲು ಗ್ರಾಮ ಹೊರವಲಯದ ಬಾವಿ ಬಳಿ ಹೋದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ಮಗಳು ಧನಲಕ್ಷ್ಮಿ ರಕ್ಷಣೆಗೆ ಅಜಯ್ ಮತ್ತು ಅಜಯ್ ರಕ್ಷಣೆಗೆ ತಾಯಿ ಮುಂದಾದಾಗ ದುರ್ಘಟಣೆ ಸಂಭವಿಸಿದೆ. ಈ ಕುರಿತು ಚಿಕ್ಕಬಳ್ಳಾಪುರ ಗ್ರಾಮಾಂತರ ಪೋಲಿಸರು ಸ್ಥಳಕ್ಕೆ ಬೇಟಿ ಪರೀಶಿಲನೆ ನಡೆಸಿದ್ದು, ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





