ದೇವರ ಅವತಾರ ಅನೇಕ, ಭಕ್ತರು ಅಪಾರ. ಕಲ್ಲಿನಲ್ಲೂ ಒಂದಿಷ್ಟು ದೇವರ ಆಕಾರ ಗೊಚರವಾದ್ರೇ ಆ ಕಲ್ಲಿಗೆ ದೇವರ ಹೆಸರಿಟ್ಟು ಅದಕ್ಕೆ ಜನರು ಭಕ್ತಿಯ ಜೀವ ತುಂಬುತ್ತಾರೆ. ಇಂತಹ ದೇವರುಗಳು ಭಾರತ ಅಷ್ಟೇ ಅಲ್ಲಾ ಪ್ರಪಂಚದ ಎಲ್ಲ ಕಡೆಯೂ ಗೋಚರವಾಗುತ್ತದೆ. ಪ್ರಮುಖವಾಗಿ ಶಿವ ಮತ್ತು ಪಾರ್ವತಿ ಪುತ್ರ ಸುಬ್ರಹ್ಮಣ್ಯ. ಗಣೇಶನ ಸಹೋದರ. ದಕ್ಷಿಣ ಭಾರತದಲ್ಲಿ ಸುಬ್ರಹ್ಮಣ್ಯನನ್ನು ಕುಲದೇವತೆಯಾಗಿಯೂ ಪೂಜಿಸಲಾಗುತ್ತದೆ. ಈತನನ್ನು ಷಣ್ಮುಖ, ಮುರುಗ, ಕಾರ್ತಿಕೇಯ ಎನ್ನುತ್ತಾರೆ. ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ವಿಶೇಷವಾಗಿ ಕಾರ್ತಿಕನನ್ನು ಪೂಜಿಸಲಾಗುತ್ತದೆ. ಸುಬ್ರಮಣ್ಯನಿಗೆ ನಮಸ್ಕರಿಸಿ 272 ಮೆಟ್ಟಿಲುಗಳನ್ನು ಹತ್ತಿ ಮೇಲೆ ಹೋದರೆ ಸುಂದರವಾದ ಗುಹೆ ಸಿಗುತ್ತದೆ. ಇದು ‘ಲೈಮ್ ಸ್ಟೋನ್’ನಿಂದ ರಚನೆಯಾದ ಗುಹೆಯಾಗಿದ್ದು, ಸುಮಾರು ನಾಲ್ಕುನೂರು ಮಿಲಿಯನ್ ವರ್ಷಗಳ ಹಿಂದೆ ರೂಪುಗೊಂಡಿತೆಂಬ ನಂಬಿಕೆ ಇದೆ.ಮಲೇಷ್ಯಾದಲ್ಲಿ ಬ್ರಿಟಿಷರ ಅಧಿಕಾರವಧಿಯಲ್ಲಿ (1878) ಈ ಗುಹೆಯು ವಿಶೇಷ ಪ್ರಾಮುಖ್ಯತೆ ಗಳಿಸಿತ್ತು. .
bigtvnews | Hubli Dharwad News | Kannada News | Karnataka News Hubli News | News In Hubli | Local news





