ಮಂಗಳೂರು:ಯೋಗ ದಿನಾಚರಣೆ ನಾಳೆ ನಡೆಯುತ್ತೆ. ಅದಕ್ಕಿಗಾಗಲ್ಲೇ ಹಲವು ವಿದ್ಯಾಸಂಸ್ಥೆಗಳಲ್ಲಿ ಹಾಗೂ ಮೈದಾನಗಳಲ್ಲಿ ತರಭೇತಿ ನಡೆಯುತ್ತಿದೆ. ಆದ್ರೇ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ವ್ಯಕ್ತಿಯೊರ್ವ ತರಭೇತಿ ಕೇಂದ್ರಗಳನ್ನು ಬಿಟ್ಟು ರಸ್ತೆ ಮದ್ಯೆದಲ್ಲಿ ಯೋಗಾಭ್ಯಾಸ ನಡೆಸಿದ್ದಾನೆ. ಇಷ್ಟೇ ಅಲ್ಲದೇ ಯೋಗದ ಜೊತೆಗೆ ಕರಾಟೆಯ ಒಂದೆರಡು ಜಲಕ್ ಸಹ ನೀಡಿದ್ದಾನೆ. ಈತನ ಈ ಹುಚ್ಚು ವರ್ತನೆ ನೆರೆದಿದ್ದ ಜನರಿಗೆ ಒಂದಿಷ್ಟು ಕಾಲ ಮನರಂಜನೆ ತಂದಿತ್ತು. ಈತ ಮದ್ಯಪಾನ ಮಾಡಿದ್ದನಾ ಅಥವಾ ಮಾನಸಿಕ ಅಸ್ವಸ್ಥತೆಯನ್ನು ಹೊಂದಿದ್ದಾನಾ ಎಂಬುದು ತಿಳಿದು ಬಂದಿಲ್ಲ. ಒಟ್ಟಿನಲ್ಲಿ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





