ಹುಬ್ಬಳ್ಳಿ: ದೇಶದ ಅನ್ನದಾತ ದಿನದಿಂದ ದಿನಕ್ಕೆ ಹಲವಾರು ಸಮಸ್ಯೆ ಅನುಭವಿಸುತ್ತಿದ್ದು, ರಾಜ್ಯ ಸರ್ಕಾರ ಎಚ್ಚೇತ್ತುಕೊಂಡು ಶೀಘ್ರವಾಗಿ ಸಮಸ್ಯೆಗಳನ್ನು ಬಗೆಹರಿಸುವಂತೆ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆಗ್ರಹಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ನೀಡುವ ಬಿಸಿ ಊಟದಲ್ಲಿ ರಾಜಕೀಯ ಮಾಡುತ್ತಿದ್ದು, ರಾಜ್ಯದಲ್ಲಿ ಜಾರಿಯಿರುವ
ಬಿಸಿಯೂಟದ ಗುಣಮಟ್ಟವನ್ನು ಶೀಘ್ರವಾಗಿ ಸುಧಾರಿಸಬೇಕು ಎಂದು ಅವರು
ಸರ್ಕಾರಕ್ಕೆ ಒತ್ತಾಯಿಸಿದರು. ರಾಜ್ಯದಲ್ಲಿ ರೈತರ ಹೊಲಗಳ ದಾರಿ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಕ್ಷೆಯಲ್ಲಿ ದಾರಿ ಗುರುತು ಇದ್ದರೇ ಮಾತ್ರ ಜಮೀನಿಗೆ ಹೋಗಲು ದಾರಿ ನೀಡುತ್ತಾರೆ ವಿನಃ ಗುರುತು ಇಲ್ಲದ ಪಕ್ಷದಲ್ಲಿ ಕೋರ್ಟಗೆ ಹೋಗಿ ದಾರಿ ಪಡೆದುಕೊಂಡು ಬನ್ನಿ ಎಂಬುವಂತ ಮಾತುಗಳು ರೈತವಲಯದಲ್ಲಿ ಕೇಳಿ ಬರುತ್ತಿದ್ದು, ಇದಕ್ಕೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸಮಸ್ಯೆಗೆ ಅಂತ್ಯ ಹಾಡಬೇಕು ಎಂದು ಅವರು ಹೇಳಿದರು.
ರೈತರ ಜಮೀನುಗಳನ್ನು ಸ್ವತಂತ್ರ ಪೂರ್ವದಲ್ಲಿಯೇ ಮೋಜಣಿ ಮಾಡಿದ್ದು, ಇದುವರೆಗೂ ಸರ್ಕಾರ ರೈತರ ಜಮೀನಿನ ಸರ್ವೇ ಮಾಡುವ ಯಾವುದೇ ಕ್ರಮ
ಜರುಗಿಸಿಲ್ಲ ಎಂದು ಅವರು ಗಂಭೀರವಾಗಿ ಆರೋಪಿಸಿದರು. ರಾಜ್ಯದಲ್ಲಿ ಸತತ
3-4 ವರ್ಷಗಳಿಂದ ಬರಗಾಲ ಆವರಿಸಿದ್ದು, ಬಿತ್ತಿದ ಬೆಳೆಗಳು ಕೈ ಸೇರುತ್ತಿಲ್ಲ ಈ ಕುರಿತು ಪ್ರಸ್ತುತ ರಾಜ್ಯ ಬಿಜೆಪಿ ಸರ್ಕಾರ ರೈತರ ಹಿತಾಸಕ್ತಿ ಕಾಪಾಡುವ
ನಿಟ್ಟಿನಲ್ಲಿ ಅನ್ನದಾತನ ಕಣ್ಣಿರು ಒರೆಸುವ ಕೆಲಸ ಮಾಡಬೇಕು ಎಂದು ಅವರು ವಿನಂತಿಸಿಕೊಂಡರು.ಈ ಹಿಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿರುವ
ತಪ್ಪನ್ನು ಈಗಿನ ಮುಖ್ಯಮಂತ್ರಿಗಳು ಮಾಡಬಾರದು ರೈತರ ಸಮಸ್ಯೆಗಳನ್ನು ಸ್ಪಷ್ಟವಾಗಿ ಆಲಿಸಿ ರೈತರ ಸಮಸ್ಯೆಗಳಿಗೆ ಸೂಕ್ತ ಸ್ಪಂಧಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಳವಪ್ಪ ಒಡೆಯರ್, ಸದಾಶಿವ ಬರಟಗಿ ಸೇರಿದಂತೆ ಇತರರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





