ವಿಜಯಪುರ
ಕೇವಲ ಆರು ರೂಪಾಯಿ ಚಿಲ್ಲರೆ ಹಣಕ್ಕಾಗಿ ಜಗಳ
ಇಂದು ಕಂಡಕ್ಟರ್ ಕಮ್ ಡ್ರೈವರ್ ಮೇಲೆ ರಾಡ್ ನಿಂದ ಮಾರಣಾಂತಿಕ ಹಲ್ಲೆ
ತಲೆ ಹಾಗೂ ಮುಖಕ್ಕೆ ಗಾಯ
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾದಲ್ಲಿ ಘಟನೆ
ಯೂನೂಸಸಾಬ್ ಉಸ್ಮಾನ ಸಾಬ್ ಬಡದಾ (41) ಹಲ್ಲೆಗೊಳಗಾದ ಕಂಡಕ್ಟರ್
ಸುಲೇಮಾನ್ ಬಂದಗಿಸಾಬ್ ಹಚ್ಯಾಳ್ ಎಂಬಾತನಿಂದ ಕಂಡಕ್ಟರ್ ಮೇಲೆ ಹಲ್ಲೆ
ಗಾಯಾಳು ಕಂಡಕ್ಟರ್ ಇಂಡಿ ಸರ್ಕಾರಿ ತಾಲೂಕಾ ಆಸ್ಪತ್ರೆಗೆ ದಾಖಲು
ನಿನ್ನೆ ಬಸ್ ಟಿಕೆಟ್ ಹಿಂದೆ ಆರು ರೂಪಾಯಿ ಚಿಲ್ಲರೆ ಬರೆದುಕೊಟ್ಟಿದ್ದ ಕಂಡಕ್ಟರ್ ಯೂನಸಸಾಬ್
ಹಣ ಮರಳಿಸುವ ವೇಳೆ ಸುಲೇಮಾನ್ ಜೊತೆಗೆ ಜಗಳವಾಗಿತ್ತು
ಕೆಎಸ್ಆರ್ಟಿಸಿ ಡಿಸಿ ಕಚೇರಿವರೆಗೆ ತೆರಳಿ ಆರು ರೂಪಾಯಿ ಪಡೆದಿದ್ದ ಪ್ರಯಾಣಿಕ ಸುಲೇಮಾನ್
ಇದರಿಂದ ಚಾಲಕ ಕಂ ನಿರ್ವಾಹಕ ಯುನೂಸಸಾಬ್ ಮೇಲೆ ಆಕ್ರೋಶ ಹೊಂದಿದ್ದ ಸುಲೇಮಾನ್
ಇಂದು ಕಂಡಕ್ಟರ್ ಕಂ ಚಾಲಕ ಬಸ್ಸನ್ನು ತೆಗೆದುಕೊಂಡು ತಾಂಬಾಕ್ಕೆ ಹೋದ ವೇಳೆ ಹಲ್ಲೆ ನಡೆಸಿದ ಸುಲೇಮಾನ್
ವಿಜಯಪುರ ಜಿಲ್ಲೆಯ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
bigtvnews | Hubli Dharwad News | Kannada News | Karnataka News Hubli News | News In Hubli | Local news





