Breaking News

ಕಾರ್​ಗೆ ಪ್ರವಾಸಿ ವಾಹನ ಡಿಕ್ಕಿ, ಕೇಸ್​ ದಾಖಲಿಸದಂತೆ ಡಿಸಿ ಆದೇಶ..!

ಚಿಕ್ಕಮಗಳೂರು: ಅಧೀನ ಅಧಿಕಾರಿಗಳೊಂದಿಗೆ ದತ್ತ ಪೀಠಕ್ಕೆ ತೆರಳುತ್ತಿದ್ದ ಜಿಲ್ಲಾಧಿಕಾರಿಗಳ ಕಾರ್​ಗೆ ಪ್ರವಾಸಿ ವಾಹನವೊಂದು ಡಿಕ್ಕಿ ಹೊಡೆದಿದೆ. ಚಿಕ್ಕಮಗಳೂರು ತಾಲೂಕಿನ ದತ್ತಪೀಠ ರಸ್ತೆಯ ಹಾಗಲ್​ಖಾನ್ ಬಳಿ ಘಟನೆ ನಡೆದಿದೆ.ಜಿಲ್ಲಾಧಿಕಾರಿ ಶ್ರೀರಂಗಯ್ಯ ಸಂಚರಿಸುತ್ತಿದ್ದ ಕಾರ್​ನ ಹಿಂಬದಿಯ ಬಂಪರ್​ಗೆ, ಹಾಸನ ಮೂಲದ ಪೊರ್ಡ್ ಐಕಾನ್ ಕಾರ್​ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಜಿಲ್ಲಾಧಿಕಾರಿಗಳ ಕಾರ್​ನ ಬಂಪರ್ ​ಹಾಗೂ ಇಂಡಿಕೇಟರ್​ಗಳು ಜಖಂಗೊಂಡಿವೆ. ಅದೃಷ್ಟವಶಾತ್ ಜಿಲ್ಲಾಧಿಕಾರಿಗಳು ಅಪಾಯದಿಂದ‌ ಪಾರಾಗಿದ್ದಾರೆ. ಹಾಸನ ಮೂಲದ ಯುವಕರು ಸಂಚರಿಸುತ್ತಿದ್ದ KA 04 Z 0560 ನಂಬರ್​ನ ಕಾರ್​ ಹಾಗೂ ಯುವಕರ ಮೇಲೆ ಜಿಲ್ಲಾಧಿಕಾರಿಗಳು ಯಾವುದೇ ಕಾನೂನು ಕ್ರಮ ಜರುಗಿಸದಂತೆ ಸೂಚಿಸಿದ್ದಾರೆ.

Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *