Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ಯೋಗಿ ನಾಡಲ್ಲಿ, ಮೋದಿ ಱಲಿ ಮುಗಿಸಿ ಬರುತ್ತಿದ್ದ ಮತ್ತೊಬ್ಬ ಪೊಲೀಸ್​ ಕಲ್ಲೇಟಿಗೆ ಬಲಿ..!

ಲಖೌನ್: ಬುಲಂದರ್​ಶಹರ್​​ನಲ್ಲಿ ನಡೆದ ಪೊಲೀಸ್​​​ ಇನ್ಸ್​ಪೆಕ್ಟರ್ ಸುಭೋದ್​ ಕುಮಾರ್​ ಸಿಂಗ್​ರ​​ ಹತ್ಯೆಯ ಕಹಿ ಘಟನೆ ಇನ್ನೂ ಹಸಿ ಹಸಿಯಾಗಿದೆ. ಇದರ ಬೆನ್ನಲ್ಲೇ, ನಿನ್ನೆ ಗಾಜೀಪುರ ಜಿಲ್ಲೆಯಲ್ಲಿ ನಡೆದ ಕಲ್ಲು ತೂರಾಟದಲ್ಲಿ ಪೊಲೀಸ್​​ ಪೇದೆಯೊಬ್ಬ ಮೃತಪಟ್ಟಿದ್ದಾರೆ.ಗಾಜೀಪುರ್​​ನಿಂದ 350ಕಿ.ಮೀ. ದೂರವಿರುವ ಕಥವಾದಲ್ಲಿ ಹತ್ಯೆ ನಡೆದಿದ್ದು, ಮೃತ ಪೇದೆಯನ್ನು ನಾನೆರಾ ಪೊಲೀಸ್​ ಠಾಣೆಯ ಸುರೇಶ್​​ ವತ್ಸ್​​ ಎಂದು ಗುರುತಿಸಲಾಗಿದೆ. ನಿಶಾದ್​ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ನಿಷಾದ್​​ ಪಾರ್ಟಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಇದಕ್ಕಾಗಿ, ಜಿಲ್ಲಾ ಹೆಡ್​ ಕ್ವಾರ್ಟರ್ಸ್​ ಬಳಿ ಧರಣಿ ನಡೆಸಲು ಅನುಮತಿ ಕೇಳಿದ್ರು. ಆದ್ರೆ ಮೋದಿಯ ಱಲಿ ಇದ್ದಿದ್ದರಿಂದ ಪ್ರತಿಭಟನೆಗೆ ಅವಕಾಶ ನೀಡಿರಲಿಲ್ಲ. ಹೀಗಾಗಿ, ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ರು.ಇನ್ನು ಈ ಮಧ್ಯೆ ಱಲಿ ಮುಗಿಸಿಕೊಂಡ ಬರುತ್ತಿದ್ದ ಪೊಲೀಸರು, ಹೆದ್ದಾರಿಯಿಂದ ತೆರಳುವಂತೆ ಧರಣಿ ನಿರತರಿಗೆ ಸೂಚಿಸಿದ್ರು ಎನ್ನಲಾಗಿದೆ. ಇದ್ರಿಂದ ರೊಚ್ಚಿಗೆದ್ದ ಉದ್ರಿಕ್ತರು ಪೊಲೀಸರ ಮೇಲೆ ಕಲ್ಲೂ ತೂರಾಟ ನಡೆಸಿದ್ರು. ಈ ವೇಳೆ ಕಲ್ಲೇಟಿಗೆ ಸುರೇಶ್​ ವತ್ಸ್​ ಎಂಬ ಕಾನ್​ಸ್ಟೇಬಲ್​ ಬಲಿಯಾಗಿದ್ದಾನೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಯೋಗಿ ಆದಿತ್ಯನಾಥ್​​ ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸುವಂತೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ. ಅಲ್ಲದೇ ಮೃತ ಪೊಲೀಸ್​ ಪೇದೆಯ ಕುಟುಂಬಕ್ಕೆ ₹40 ಲಕ್ಷ ಹಾಗೂ ಹಾಗೂ ಪೇದೆಯ ಪೋಷಕರಿಗೆ ₹10 ಲಕ್ಷ ಪರಿಹಾರ ಘೋಷಿಸಿದ್ದಾರೆ.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *