Breaking News

ಅಕಾಲಿಕ ಮಳೆಯ ಅವಾಂತರ-ಸಿಡಿಲು ಬಡಿದು ಎರಡು ಎಮ್ಮೆಗಳು ಬಲಿ

ಸಿಡಿಲಿಗೆ ಬಲಿಯಾದ ಎಮ್ಮೆಗಳ ಎದುರು ಮನೆಯವರ ಆಕ್ರಂದನ

ಧಾರವಾಡ; ಅಳ್ನಾವರ ತಾಲೂಕಿನ ಶಿವನಗರ ಗ್ರಾಮದಲ್ಲಿ ನಿನ್ನೆ (ಮಂಗಳವಾರ) ಸುರಿದ ಅಕಾಲಿಕ ಮಳೆಯಿಂದ ಸಿಡಿಲು ಬಡಿದು ಎರಡು ಎಮ್ಮೆಗಳು ಸಾವನ್ನಪ್ಪಿವೆ.

ಮೃತ ಎಮ್ಮೆಗಳು ಗಂಗಾರಾಮ ವಿಠಲ್ ಕೋಳಾಪಟ್ಟಿ ಅವರಿಗೆ ಸೇರಿದ್ದು, ಈ ದುರಂತದಿಂದ ರೈತ ಗಂಗಾರಾಮ ಅವರಿಗೆ ಸುಮಾರು ಒಂದು ಲಕ್ಷ ರೂ. ಮೌಲ್ಯದ ನಷ್ಟವಾಗಿದೆ. ಶಿವನಗರ ಗ್ರಾಮದ ಜನರಿಗೆ ಹೈನುಗಾರಿಕೆಯೇ ಮೂಲ ಆದಾಯ. ಅಕಾಲಿಕ ಮಳೆ ಸಿಡಿಲಿಗೆ ಅಸುನೀಗಿದ ಜಾನುವಾರಗಳ ಘಟನೆ ಗಂಗಾರಾಮ ಅವರನ್ನು ಚಿಂತೆಗೀಡು ಮಾಡಿದೆ. ಕಳೆದ ಆರು ತಿಂಗಳ ಹಿಂದೆ ಸುರಿದ ಮಳೆಗೆ ಕಂಬಾರಗಣವಿ ಹಳ್ಳದಲ್ಲಿಯು ಸಹ ಎರಡು ಜಾನುವಾರಗಳು ಕೊಚ್ಚಿ ಹೋಗಿದ್ದವು. ಅದಕ್ಕೆ ಯಾವುದೇ ಸಾಂತ್ವನವಾಗಲಿ, ಪರಿಹಾರವಾಗಲಿ ಇದುವರೆಗೂ ದೊರೆತಿಲ್ಲ. ಇದೀಗ ಮತ್ತೆ ಎರಡು ಎಮ್ಮೆಗಳು ಸಿಡಿಲಿಗೆ ಅಸುನೀಗಿವೆ.

ಸಂಬಂಧಪಟ್ಟ ಅಧಿಕಾರಿಗಳು ಈ ಘಟನೆಯನ್ನು ಪರಿಶೀಲಿಸಿ ಅವರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಮಾಡಬೇಕು ಎಂದು ಹೊನ್ನಾಪುರ ಗ್ರಾ.ಪಂ ಸದಸ್ಯ ಸಂತೋಷ ಕಲಾಜ ಆಗ್ರಹಿಸಿದ್ದಾರೆ.

Share News

About admin

Check Also

ಕಾನೂನು ರಕ್ಷಕನೇ ಭಕ್ಷಕ..! ಪೋಕ್ಸೊ ಪ್ರಕರಣದಲ್ಲಿ ಪಿಎಸ್‌ಐ ಬಂಧನ…

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೊ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯ ಬಂಧನ, ಭಟ್ಕಳ: ಸಾರ್ವಜನಿಕರ ರಕ್ಷಣೆ ಮಾಡಬೇಕಿದ್ದ ಪೊಲೀಸ್ ಅಧಿಕಾರಿಯೊಬ್ಬನೇ …

Leave a Reply

Your email address will not be published. Required fields are marked *