
ಕುಂದಗೋಳ: ಎಲ್ಲೇಡೆ ಸುರಿಯುತ್ತಿರುವ ಅಕಾಲಿಕ ಮಳೆಯ ಪರಿಣಾಮ ಬೆಳೆದ ಬೆಳೆ ನೆಲಕಚ್ಚಿ ಅನ್ನದಾತನ ಬದುಕು ಕಷ್ಟವಾಗಿ ಅದೆಷ್ಟೋ ಭಾಗಗಳಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ. ಈ ಪರಿಸ್ಥಿತಿಯನ್ನು ಮನಗಂಡ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಜನರು ಶಾಂತಿನಾಥರ ಮೋರೆ ಹೋಗಿ ಮಳೆ ಆರ್ಭಟ ಕಡಿಮೆ ಮಾಡುವಂತೆ ಪಂಚಾಮೃತ ಅಭಿಷೇಕ ಕೈಗೊಂಡಿದ್ದಾರೆ.
ಗುಡೇನಕಟ್ಟಿ ಗ್ರಾಮದ ಶ್ರೀ 1008 ಶಾಂತಿನಾಥರ ಜೈನ್ ಮಂದಿರದಲ್ಲಿ ಇಂದು ಜೈನ ಧರ್ಮದ ಗುರುಗಳು ಮಳೆರಾಯ ಆರ್ಭಟ ಕಡಿಮೆ ಮಾಡಿ ರೈತರು ಬೆಳೆ ಉಳಿಸಿ ಜನರ ಬದುಕು ಕಾಪಾಡುವಂತೆ ಬೇಡಿಕೆ ಸಮರ್ಪಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





