Breaking News

ಕಳಚಿಬಿದ್ದ ಮೈಲಾರಲಿಂಗೇಶ್ವರನ ತ್ರಿಶೂಲ



ವಿಜಯನಗರ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಐತಿಹಾಸಿಕ ಸುಕ್ಷೇತ್ರ ಮೈಲಾರಲಿಂಗೇಶ್ವರನ ದೇಗುಲದಲ್ಲಿ ತ್ರಿಶೂಲ ಕಳಚಿಬಿದ್ದಿದೆ.

ದೇಗುಲದ ಶಿಬಾರದ ಮೇಲೆ ಅಳವಡಿಸಿದ್ದ ತ್ರಿಶೂಲ ಕೆಳಗೆ ಬಿದ್ದಿದೆ. ಕಳೆದ ವರ್ಷ ಮೈಲಾರಲಿಂಗೇಶ್ವರ ಜಾತ್ರೆ ವೇಳೆ ಕೂಡ ಇದೇ ತ್ರಿಶೂಲ ಕಳಚಿ ಬಿದ್ದಿತ್ತು. ಆದರೆ ದೇವಾಲಯದ ಆಡಳಿತ ಮಂಡಳಿ ಈ ಬಗ್ಗೆ ಪರಿಶೀಲಿಸಲು ಸಿಸಿ ಕ್ಯಾಮರಾದಲ್ಲಿನ  ದೃಶ್ಯಾವಳಿಗಳನ್ನು ಗಮನಿಸಿದೆ. ಈ ವೇಳೆ ಕೋತಿಗಳು ತ್ರಿಶೂಲವನ್ನು ಬೀಳಿಸಿದ್ದು ಬೆಳಕಿಗೆ ಬಂದಿದೆ. ಕೋತಿ ಶಿಬಾರದ ಕಲ್ಲಿನ ಮೇಲೆ ಹತ್ತಿ ತ್ರಿಶೂಲ ಬಿಳಿಸಿದೆ. ಇಲ್ಲಿನ ಮೈಲಾರಲಿಂಗೇಶ್ವರನ ಕಾರ್ಣಿಕ ಈಡಿ ದೇಶ, ರಾಜ್ಯ ರಾಜಕಾರಣಕ್ಕೆ ದಿಕ್ಸೂಚಿಯಾಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಇದೆ.

Share News

About admin

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *