Breaking News

ಕೆಲವೊಂದು ರೈಲ್ವು ಸಂಚಾರ ರದ್ದು

ಹುಬ್ಬಳ್ಳಿ: ರೈಲ್ವೆ ಸಂಬಂಧಿತ ಕಾಮಗಾರಿ ನಡೆಯಲಿರುವ ಕಾರಣ ಹಲವು ರೈಲುಗಳ ಸಂಚಾರ ಮತ್ತು ಫೆ. 1 ಹಾಗೂ 2ರಂದು ಹುಬ್ಬಳ್ಳಿ-ದಾದರ್‌ ನಿತ್ಯ ಎಕ್ಸ್‌ಪ್ರೆಸ್‌ ರೈಲು ಹುಬ್ಬಳ್ಳಿಯಿಂದ, 2 ಹಾಗೂ 3ರಂದು ದಾದರ್‌ನಿಂದ ರದ್ದುಪಡಿಸಲಾಗಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಳಂಬ: ಮಾ. 27ರಿಂದ 31ರ ವರೆಗೆ ಮತ್ತು ಫೆ. 2ರಂದು ಕೊಲ್ಹಾಪುರ-ತಿರುಪತಿ ಹರಿಪ್ರಿಯಾ ಎಕ್ಸ್‌ಪ್ರೆಸ್‌ ರೈಲಿನ ಸಂಚಾರದಲ್ಲಿ 30 ನಿಮಿಷ ವಿಳಂಬಾಗಲಿದೆ. 27ರಿಂದ ಫೆ. 2ರ ತನಕ ಹುಬ್ಬಳ್ಳಿ-ದಾದರ್‌ ಎಕ್ಸ್‌ಪ್ರೆಸ್‌ ರೈಲು 15 ನಿಮಿಷ, ವಾಸ್ಕೋಡಗಾಮ-ಹಜರತ್‌ ನಿಜಾಮುದ್ದೀನ್‌ ಗೋವಾ ನಿತ್ಯ ಸಂಚರಿಸುವ ರೈಲು 20 ನಿಮಿಷ, ಫೆ. 1ರಂದು ಹರಿಪ್ರಿಯಾ ಎಕ್ಸ್‌ಪ್ರೆಸ್‌ ಕೊಲ್ಹಾಪುರದಿಂದ ಸಂಚರಿಸುವಾಗ ಒಟ್ಟು 90 ನಿಮಿಷ ತಡವಾಗಿ ಗುರಿ ತಲುಪಲಿದೆ.

ಮಾ. 31ರಂದು ಹಜರತ್‌ ನಿಜಾಮುದ್ದೀನ್‌-ಮೈಸೂರು ಸ್ವರ್ಣ ಜಯಂತಿ ಎಕ್ಸ್‌ಪ್ರೆಸ್ ರೈಲು ಹಜರತ್‌ನಿಂದ ಹೊರಡುವಾಗ ಪುಣೆ, ಸೊಲ್ಲಾಪುರ, ಹೂಟಗಿ, ಗದಗ ಮತ್ತು ಹುಬ್ಬಳ್ಳಿ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಸತಾರ, ಕರಾಡ, ಸಾಂಗ್ಲಿ, ಮೀರಜ್‌, ಬೆಳಗಾವಿ ಮತ್ತು ಧಾರವಾಡ ನಿಲ್ದಾಣಗಳಲ್ಲಿ ನಿಲುಗಡೆ ರದ್ದುಪಡಿಸಲಾಗಿದೆ.




Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *