ಕುಂದಗೋಳ : ವ್ಯಕ್ತಿ 2600 ರೂಪಾಯಿ ಫೋನ್ ಪೇ ಮಾಡಿ ‘ಡ’ ಉತಾರ ಪಡೆದಿದ್ದು ಇದೀಗ ವಿಷಯ ಬಹಿರಂಗವಾದ ಘಟನೆ ಕುಂದಗೋಳ ತಹಶೀಲ್ದಾರ್ ಸರ್ಕಾರಿ ಕಚೇರಿಯಲ್ಲಿ ನಡೆದಿದೆ.
ತುರ್ತು ಅವಶ್ಯಕತೆಗೆ ‘ಡ’ ಉತಾರ ಮತ್ತು ಎಂ.ಆರ್ ಪೂರೈಸುತ್ತೇನೆ ಎಂದು ತಹಶೀಲ್ದಾರ್ ಕಚೇರಿಯಲ್ಲಿ ಓಡಾಡುವ ವ್ಯಕ್ತಿಯೋರ್ವ ಹಂತ ಹಂತವಾಗಿ 2600 ರೂಪಾಯಿ ತನ್ನ ಕುಟುಂಬದ ಸದಸ್ಯರ ಮೊಬೈಲಿಗೆ ಫೋನ್ ಪೇ ಮಾಡಿಸಿಕೊಂಡು ರೈತರಿಗೆ ಉತಾರ ನೀಡಿದ್ದಾನೆ.
ಜಾಸ್ತಿ ಹಣ ಕೊಟ್ಟರೇ ತಮ್ಮ ಅಗತ್ಯ ದಾಖಲಾತಿ ಪೋಸ್ಟ್ ಮೂಲಕ ಕಳಿಸುತ್ತೇವೆ ಎಂಬ ಮಾಹಿತಿ ಸಹ ಲಭ್ಯವಾಗಿದೆ.ಒಟ್ಟಿನಲ್ಲಿ ಕುಂದಗೋಳ ತಹಶೀಲ್ದಾರ್ ಕಚೇರಿಯಲ್ಲಿ ಹಣ ಪಡೆದು ರಶೀದಿ ಸಹ ನೀಡದೆ ದಾಖಲೆ ಮಾರಾಟ ಹಂಚಿಕೆ ಜಾಲ ಹುಟ್ಟಿಕೊಟ್ಟಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು.
bigtvnews | Hubli Dharwad News | Kannada News | Karnataka News Hubli News | News In Hubli | Local news

