ಸ್ಯಾಂಡಲ್ ವುಡ್ ನಟ ದಿ.ಸಂಚಾರಿ ವಿಜಯ್ ಅಭಿನಯದ ತಲೆದಂಡ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ .
ಪ್ರವೀಣ್ ಕೃಪಾಕರ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ . ತಲೆದಂಡ ಸಿನಿಮಾಗೆ ಹರಿಕಾವ್ಯ ಅವರ ಅದ್ಭುತ ಸಂಗೀತವಿದೆ . ಸಿನಿಮಾದಲ್ಲಿನ ಕೆಲಸ , ಸಂಗೀತದ ಕುರಿತಾಗಿ ಹರಿಕಾವ್ಯ ಅವರು ಕೆಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ . ತಲೆದಂಡ ಚಿತ್ರಕಥೆ ಕೇಳಿದ್ದ ಹಾಗೆ ಪೂರ್ತಿ ಪರಿಸರದ ಒಂದು ಕಂಪ್ಲಿಟ್ ಚಿತ್ರಣ ಬರುತ್ತದೆ . ಆ ಚಿತ್ರಕ್ಕೆ ಸಂಗೀತ ಏನು ಮಾಡಬೇಕೆಂಬ ಯೋಚನೆ ಮಾಡಿದಾಗ ಆ ಪ್ರಕೃತಿಯ ಕಲರವವೇ ಮೊದಲು ತಲೆಗೆ ಬರುತ್ತೆ . ಹಾಗಾಗಿ ಈ ಚಿತ್ರಕ್ಕೆ ಪ್ರಕೃತಿಯೇ ಸಂಗೀತದ ಜೀವಾಳವಾಗಿದೆ ಅಂತಾರೆ ಹರಿಕಾವ್ಯ ಇದು ಸಂಚಾರಿ ವಿಜಯ್ ನಟನೆಯ ಕೊನೆಯ ಚಿತ್ರವಾಗಿದೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

