ಹುಬ್ಬಳ್ಳಿ: ಹುಬ್ಬಳ್ಳಿ ಆರ್ಟ್ಸ್ ಸರ್ಕಲ್ ವಜ್ರ ಮಹೋತ್ಸವವನ್ನು ಏ.29 ರಿಂದ ಮೆ.1 ರ ವರೆಗೆ ಮೂರು ದಿನಗಳಕಾಲ ಭವ್ಯವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹುಬ್ಬಳ್ಳಿ ಆಟ್ಸ ಸರ್ಕಲ್ನ ಚಂದ್ರಿಕಾ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅತ್ಯಂತ ಪ್ರಸಿದ್ಧ ಕಾಲವಿದರು ಈ ಉತ್ಸವದಲ್ಲಿ ಭಾಗವಹಿಸುತ್ತಾರೆ. ಬೆಳಿಗ್ಗೆ 8 ಘಂಟೆ ಯಿಂದ 10.30 ವರೆಗೆ ಮತ್ತು ಸಂಜೆಯ 5 ಘಂಟೆಯಿಂದ 9 ರವರೆಗೆ ಅವದಿಯಲ್ಲಿ, ಮೂರು ದಿನಗಳ ಕಾಲ ಕೋಳಲು, ಸಂಗೀತ ಸಿತಾರ್, ಜುಗಲ್ ಬಂದಿ, ಕಲವಿದ ಪ್ರವಿಣರಿಂದ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಮೆ.1 ಕೋನೆಯ ದಿನದಂದು ವಿಧುಷಿ ಅಶ್ವಿನಿ ಭಿಡೆ ಹಾಗೂ ದೇಶಪಾಂಡೆ ಅವರ ಸಂಗಿತದೋಂದಿಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ, ಮತ್ತು ಹುಬ್ಬಳ್ಳಿ ಆರ್ಟ್ಸ್ ಸರ್ಕಲ್ ಪ್ರಾರಂಭದಿಂದಲೂ ವಿದುಷಿ ಡಾ. ಗಂಗೂಬಾಯಿ ಹಾನಗಲ್ ಅವರ ಪುತ್ರರಾದ ಬಾಬುರಾವ್ ಹಾನಗಲ್ ಅವರ ಸೇವೆಯನ್ನು ಗುರುತಿಸಿ ಅವರಿಗೆ ಜೀವಮಾನದ ಸಾಧನೆಯ ಪ್ರಶಸ್ತಿ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ವಿಕ್ರಮ, ಶರೂರ, ಡಾ. ಮೂರಳಿಧರ್, ಅಶೋಕ್ ನಾಡಿಗೇರ್ ,ವೈಷ್ಣವಿ ಗೋರೆ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

