ಹುಬ್ಬಳ್ಳಿ : ಖಡಕ್ ಪೋಲಿಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ರಿಟೈರ್ಡ್ ಪಿಎಸ್ಐ ಶ್ರೀ ನಾಗಲಿಂಗಪ್ಪ ಶಿ ಲಗಳಿಯವರು ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದು ಸುದಿರ್ಘ ಕಾಲ ಸೇವೆ ಸಲ್ಲಿಸಿದ್ದ ಖಡಕ್ ಅಧಿಕಾರಿಯು ಇನ್ನು ನೆನಪು ಮಾತ್ರ.

ಹುಬ್ಬಳ್ಳಿಯಲ್ಲಿ 39 ವರ್ಷಗಳ ಕಾಲ ಸುದಿರ್ಘವಾಗಿ ಶಹರದ ಎಲ್ಲ ಠಾಣೆಗಳಲ್ಲಿ ಸೇವೆ ಸಲ್ಲಿಸಿರುವ ನಾಗಲಿಂಗಪ್ಪ ಲಗಳಿಯವರು ಒಬ್ಬ ದಕ್ಷ ಖಡಕ್ ಪೋಲಿಸ್ ಅಧಿಕಾರಿಯಾಗಿದ್ದರು.
ತಪ್ಪು ಯಾರೇ ಮಾಡಿದರು ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಂಡು ನ್ಯಾಯ ದೊರಕಿಸುತ್ತದ್ದ ದಕ್ಷ ಅಧಿಕಾರಿಯು ಇನ್ನು ನೆನೆಪು ಮಾತ್ರ..

ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲೂಕಿನ ಕಿತ್ತೂರಿನಲ್ಲಿ ಜನಿಸಿದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಧಾರವಾಡದಲ್ಲಿ ಮುಗಿಸಿದರು.1976 ರಲ್ಲಿ ಕಾನ್ಸ್ಟೇಬಲ್ ಆಗಿ ಸೇವೆ ಸೇರಿದ ಇವರು ತಮ್ಮ ಕಾರ್ಯಕ್ಷೇಮತೆ ಮೂಲಕ 39 ವರ್ಷಗಳ ಕಾಲ ಪಿಎಸ್ ಐ ಹಾಗೂ ಇತರೆ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಪದೋನ್ನತಿ ರಿಟೈರ್ಡ್ ಆಗಿದ್ದರು.ನಿನ್ನೆ ರಾತ್ರಿ 12 ಗಂಟೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂಬದು ಅತಿ ಬೇಸರದ ಸಂಗತಿ..
bigtvnews | Hubli Dharwad News | Kannada News | Karnataka News Hubli News | News In Hubli | Local news

