ರಟ್ಟೀಹಳ್ಳಿ : ಪಟ್ಟಣದ ಹೊರವಲಯದ ಜಮೀನೊಂದರಲ್ಲಿ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದ ವೇಳೆ ಮಂಗಳವಾರ ಸಂಜೆ ಸಿಡಿಲು ಬಡಿದು ಮಹಿಳೆ ಸಾವಿಗೀಡಾಗಿದ್ದು ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪಟ್ಟಣದ ಕೋಟೆ ನಿವಾಸಿ ಕರಿಯಮ್ಮ ರಂಗಪ್ಪ ಪರಸಪ್ಪನವರ (35) ಮೃತರು. ಲತಾ ಮಾರುತೆಪ್ಪ ಸುಣಗಾರ, ಮಾರುತೆಪ್ಪ ಸುಣಗಾರ, ಸುಧಾ ಪರಸಪ್ಪನವರ, ರತ್ನಾ ಉಪ್ಪಾರ, ಸಾಕಮ್ಮ ಸುಣಗಾರ, ರವೀಂದ್ರ ಪರಸಪ್ಪನವರ, ಜುಬೇದಾ ಬಾಗಲಮನಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ರಟ್ಟೀಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

