ಹುಬ್ಬಳ್ಳಿ: ಕಂಪನಿ ಮೇಲೆ 45 ಆ್ಯಕ್ಟ್ ಒಳಪಡುವಂತ ದೂರು ದಾಖಲು ಮಾಡಿಕೊಳ್ಳುತ್ತೆವೆ. ಕಂಪನಿಯಲ್ಲಿ ಸ್ಫೋಟಕ ವಸ್ತುಗಳನ್ನು ಬಳಕೆ ಮಾಡಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಲೋಕೇಶಕುಮಾರ್ ಜಿ. ಹೇಳಿದರು.
ಅಗ್ನಿ ದುರಂತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಇಲ್ಲಿ ಏನೇನೂ ನಿಯಮಗಳನ್ನು ಉಲ್ಲಂಘಿಸಿಲಾಗಿದೆ ಈ ಬಗ್ಗೆ ತನಿಖೆ ನಡೆಯುತ್ತಿದೆ. ಮಾಲೀಕರು ಯಾರಿಗೆ ಬಾಡಿಗೆ ಕೊಡುತ್ತಿದ್ದೇವೆ ಎಂಬುದರ ಬಗ್ಗೆ ತಿಳಿದುಕೊಂಡಿಲ್ಲ. ಅನಧಿಕೃತ ಕಂಪನಿ ನಡೆಸಲು ಹೇಗೆ ಬಾಡಿಗೆ ಕೊಟ್ಟರು, ಇದಕ್ಕೆ ಕಟ್ಟಡದ ಮಾಲೀಕರು ಕೂಡ ಹೊಣೆಯಾಗುತ್ತಾರೆ ಎಂದರು.
ಈ ಬಗ್ಗೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಯುತ್ತದೇ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಗಳನ್ನು ಜರುಗಿಸಲಾಗುವುದು ಎಂದು ಅವರು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





