ಹುಬ್ಬಳ್ಳಿ : ಆತ್ಮೀಯ ಸ್ನೇಹಿತ ಆನಂದ್ ಮಾಮನಿ ಅಂತ್ಯಕ್ರಿಯೆಗೆ ಹೋಗ್ತೀದಿನಿ. ಸಚಿವರು ನಾವೆಲ್ಲ ಅಂತ್ಯಕ್ರಿಯೆಯಲ್ಲಿ ಭಾಗೀಯಾಗ್ತೀವಿ. ಸರ್ಕಾರಿ ಗೌರವದ ಮೂಲಕ ಅಂತ್ಯಕ್ರಿಯೆ. ಆನಂದ್ ಮಾಮನಿ ಅತ್ಯಂತ ಕ್ರಿಯಾಶೀಲ ನಾಯಕರಾಗಿದ್ದರು. ಸಣ್ಣ ವಯಸ್ಸಿನಲ್ಲಿ ಅವರು ನಿಧನವಾಗಿದ್ದು ಬಹಳ ದುಃಖದ ಸಂಗತಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನಂದ್ ಮಾಮನಿ ಮೂರು ಬಾರಿ ಶಾಸಕರಾಗಿದ್ರು ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ದುಡದಿದ್ರು.ಆನಂದ್ ಮಾಮನಿ ರೈತರಿಗೆ ಅನೇಕ ಸಹಾಯ ಮಾಡಿದ್ದಾರೆ. ಮಲಪ್ರಭಾ ಲಿಫ್ಟ್ ಇರಗೇಶನ್ ಮೂಲಕ ರೈತರಿಗೆ ಸಹಾಯ ಮಾಡಿರೋದು ದೊಡ್ಡ ಸಾಧನೆ. ಇತರೇ ಕ್ಷೇತ್ರದಲ್ಲಿ ಅವರು ಅನೇಕ ಕೆಲಸ ಮಾಡಿದ್ದಾರೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

