Breaking News

ಉದ್ದೇಶ ಪೂರ್ವಕವಾಗಿ ದರ್ಗಾ ತೆರವು ನಡೀತಿದೆ : ಮುಸ್ಲಿಂ ಮುಖಂಡ ಅಲ್ತಾಫ್ ಹಳ್ಳೂರ

ಹುಬ್ಬಳ್ಳಿ : ಉದ್ದೇಶ ಪೂರ್ವಕವಾಗಿ ತೆರವು ನಡೀತಿದೆ. ಟೆಕ್ನಾಲಜಿ ಬಳಸಿ ದರ್ಗಾ ಉಳಿಸಲು ಮನವಿ ಮಾಡಿದ್ವಿ. ಮಸ್ಜಿದ್ ತೆರವುಗೊಳಿಸಬಹುದು, ಆದರೆ ದರ್ಗಾದಲ್ಲಿ ಗೋರಿ ಇರುತ್ತೆ. ಅದನ್ನ ಸ್ಥಳಾಂತರ, ತೆರವು ಮಾಡುವುದು ಕಷ್ಟ. ಎಂದು ಕಾಂಗ್ರೆಸ್ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮುಸ್ಲಿಂ ಮುಖಂಡ ಅಲ್ತಾಫ್ ಹಳ್ಳೂರ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಅಧಿಕಾರಿಗಳು ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ. ಬಿಜೆಪಿ ಹಿಂದೂ ಮುಸ್ಲಿಂ ಜನರನ್ನ ಒಡೆಯುತ್ತಿದ್ದಾರೆ.ಈ ದರ್ಗಾ ಭಾವೈಕ್ಯತೆಯ ಸಂಕೇತ. ಎಲ್ಲವನ್ನೂ ದೇವರು ನೋಡುತ್ತಿದ್ದಾನೆ. ಈ ಬಗ್ಗೆ ಸಿಎಂ ಜತೆ ಮಾತನಾಡಿದ್ದೇವೆ.ಆದರೆ ನಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ.ಮುಸ್ಲಿಂ ಸಂಸ್ಥೆಯಿಂದ ಗೋರಿ ಸ್ಥಳಾಂತರ ಮಾಡ್ತೇವಿ ಅಂದಿದ್ವಿ. ಗೋರಿ ಸ್ಥಳಾಂತರ ಮಾಡೋಕೆ ಸಾಧ್ಯ ಇದೆ ಎಂದರು.

Share News

About BigTv News

Check Also

ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ

ಬೆಂಗಳೂರು: ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದ 80 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮೌಲ್ಯ ಸುಮಾರು ₹12 …

Leave a Reply

Your email address will not be published. Required fields are marked *