ಧಾರವಾಡ ಇಂದು ಬೆಳಗ್ಗೆ ಧಾರವಾಡದ ದಾಸನಕೊಪ್ಪದ ಸರ್ಕಾರಿ ಮೆಟ್ರಿಕ್ ನಂತರದ ಹೆಚ್ಚುವರಿ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಭೇಟಿ ನೀಡಿದ ಕಾರ್ಮಿಕ ಹಾಗೂ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಕುಂದುಕೊರತೆಗಳ ಬಗ್ಗೆ ವಿಚಾರಿಸಿದರು.
ಅಷ್ಟೇ ಅಲ್ಲದೆ ಚೆನ್ನಾಗಿ ಓದಿ, ಜಿಲ್ಲೆಗೆ ಹಾಗೂ ಕುಟುಂಬಕ್ಕೆ ಹೆಸರು ತೆಗೆದುಕೊಂಡು ಬನ್ನಿ ಎಂದು ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ಸಲಹೆ ಕೂಡ ನೀಡಿದರು.
ಮೊದಲಿಂದಲೂ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ನಾಯಕರಾಗಿರುವ ಸಂತೋಷ್ ಲಾಡ್ ತಮ್ಮ ಜಿಲ್ಲೆಯ ಮಕ್ಕಳನ್ನ ಸ್ವಂತ ಮಕ್ಕಳಂತೆ ಕಾಣುತ್ತೆನೆ ಹಾಗೂ ಅವರಿಗೋಸ್ಕರ ಸದಾ ಕಾಲ ಕಾರ್ಯಪ್ರವತ್ತರಾಗಿರುವವುದಾಗಿ ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





