ಕಲಘಟಗಿ ರೈತನ ಜಮೀನಿನಲ್ಲಿ ಇದ್ದ 60 ಕ್ಕೂ ಹೆಚ್ಚು ಸಾಗುವಾನಿ ಮರಗಳನ್ನು ಪರವಾನಿಗೆ ಪಡೆಯದೆ ಮರಗಳನ್ನು ಕತ್ತರಿಸಿ ಮಾರಾಟ ಮಾಡಲಾಗಿದೆ ಎಂದು ರೈತನೊಬ್ಬರು ಆರೋಪಿಸಿದ್ದಾರೆ. ಕಲಘಟಗಿ ಪಟ್ಟಣದ ರೈತನ ಜಮೀನು [ರಿ.ಸ.ನಂ 275/1 ರಲ್ಲಿ ಬೆಳೆದ ಸಾಗುವಾನಿ ಮರಗಳನ್ನು ಕತ್ತರಿಸಿಲಾಗಿದೆ. ಸುಮಾರ 2 ಎಕರೆ 37 ಗುಂಟೆ ಜಮೀನಿನಲ್ಲಿ ಬೆಳೆದ 150 ಕ್ಕೂ ಹೆಚ್ಚು ಮರಗಳಲ್ಲಿ 60 ಕ್ಕು ಹೆಚ್ಚು ಸಾಗುವಾನಿ ಮರಗಳನ್ನು ಕತ್ತರಿಸಿದ್ದಾರೆ. ಗುಡ್ ನ್ಯೂಸ್ ವೆಲ್ ಪೇರ್ ಸೋಸೈಟಿ ಆಟ್ಸ್ & ಕಾಮರ್ಸ ಫಸ್ಟ ಗ್ರೇಡ್ -1 ಕಾಲೇಜು ಕಲಘಟಗಿ ಹಾಗೂ

ಮೌಂಟ್ ಪೋರ್ಟ ಬ್ರದರ್ಸ ಆಪ್ ಸೇಂಟ್ ಗ್ಯಾಬ್ರಿಲ್ ಗೆ ಸಂಬಂಧಸಿದ ಆಡಳಿತ ಮಂಡಳಿ ಮರಗಳನ್ನು ಕತ್ತರಿಸಿದ್ದಾರೆ ಎಂದು ರೈತ ಆರೋಪಿಸಿದ್ದಾನೆ. ಯಾವುದೇ ಅರಣ್ಯ ಇಲಾಖೆಯ ಪರವಾನಿಗೆ ಪಡೆಯದೆ ಹಾಗೂ ರೈತನ ಪರವಾನಿಗೆ ಪಡೆಯದೆ ಮರಗಳನ್ನು ಕತ್ತರಿಸಲಾಗಿದೆ ಎಂದು ತಿಳಿದು ಬಂದಿದೆ , ಸದ್ಯ ನೊಂದ ರೈತ ನ್ಯಾಯಕ್ಕಾಗಿ ಅರಣ್ಯ ಇಲಾಖೆಗೆ ದೂರ ನೀಡಿದ್ದಾನೆ. ಆದರೆ ಇದುವರೆಗೂ ಅರಣ್ಯ ಇಲಾಖೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news

