ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಕೆಎಎಸ್ ಅಧಿಕಾರಿಗಳಾದ ಈಶ್ವರ ಉಳ್ಳಾಗಡ್ಡಿಯವರಿಗೆ
ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಅಭಿನಂದಿನೆ ಸಲ್ಲಿಸಲಾಯಿತು,
ಇದರೊಟ್ಟಿಗೆ ಧಾರವಾಡ ಶಹರದ ಬೀದಿ ಬೀದಿಯಲ್ಲಿ ಬಡಜನರು ಹೊಟ್ಟೆಪಾಡಿಗಾಗಿ ಸುಮಾರು 20 ರಿಂದ 30 ವರ್ಷಗಳಿಂದ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ವಹಿವಾಟು ಮಾಡುತ್ತ ತಮ್ಮ ಉಪಜೀವನ ನಡೆಸುತ್ತಾ ಬಂದಿದ್ದು
ಇರುತ್ತದೆ, ಇತ್ತೀಚಿನ ದಿನಗಳಲ್ಲಿ ಪಾಲಿಕೆ ಅಧಿಕಾರಿಗಳು ಏಕಾಎಕಿಯಾಗಿ ಅಂಗಡಿಗಳನ್ನು ತೆರೆವುಗೊಳುಸುತ್ತಿದ್ದು,ಈ ಬಡಜನರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಹಿಂದಿನ ಆಯುಕ್ತರಿಗೆ ದಿ 27 ಜೂನ, ರಂದು ವೇದಿಕೆಯಿಂದ ಮನವಿಯನ್ನು ಸಲ್ಲಿಸಲಾಗಿತ್ತು, ಈಗ ನೂತನ ಆಯುಕ್ತರಲ್ಲಿ ಕೂಡ ಬಡಜನರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡುಬೇಕೆಂದು ಮನವರಿಕೆ ಮಾಡಲಾಯಿತು,
ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಮುಖಂಡರಾದ ಜಗದೀಶ್ ಜಾದವ್, ಮಲ್ಲಿಕಾರ್ಜನ್ ಅಸುಂಡಿ, ಅನ್ವರ ನದಾಫ, ಸೋಮು ಬೈಲವಾಡ, ಮಂಜುನಾಥ ಅಂಗಡಿ, ಬಿಲ್ಲಿಗ್ರಾಂ, ಅರುಣ್ ಸುತಾರೆ, ಉಮೇಶ್ ಶಿಂಧೆ, ಅರುಣ್ ತೆಲಗಾರ್, ಪ್ರಮೋದ್ ಶೆಟ್ಟಿ, ರಾಜು ಆಲೂರು ವೆಂಕಟರಾಯ ಕುಲಕರ್ಣಿ. ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





