ಕಮೀಷನರ್ ಸರ್ ಯಾವಾಗ ಸಿಬ್ಬಂದಿಯ ವಿಚಾರಣೆ…? ಹುಬ್ಬಳ್ಳಿ: ಮಟ್ಕಾ ದಂದೆಯಲ್ಲಿ ಬಿಗ್ ಟಿವಿ ನ್ಯೂಸ್ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದ ಇಬ್ಬರನ್ನು ಪೊಲೀಸರು ಕಾಟಾಚಾರಕ್ಕೆ ಬಂಧಿಸಿದ್ದಾರೆ. ಇಬ್ಬರ ವಿರುದ್ಧ ದೂರು ದಾಖಲಿಸಿಕೊಂಡು 5700 ವಶಕ್ಕೆ ಪಡೆದುಕೊಂಡಿದ್ದಾರೆ.ಆದರೆ ಇದರ ಮೂಲ ಒಬ್ಬ ಮಾಲಿಕನನ್ನು ಪೊಲೀಸರು ಇನ್ನೂ ವಶಕ್ಕೆ ಪಡೆಯದೆ ತನಿಖೆ ಕೊಡ ಮಾಡಿಲ್ಲ. ಯಾಕಿಷ್ಟು ನಿರ್ಲಕ್ಷ್ಯ..? ಇದು ಸಾರ್ವಜನಿಕರಲ್ಲಿ ಅಸಮಾಧಾನ ಹುಟ್ಟಿಸಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಮೂಲು ತಿಂದ ಆ ಪೊಲೀಸಪ್ಪನನ್ನು ಕೂಡಾ ಇನ್ನೂ ವಿಚಾರಣೆ ಮಾಡಿಲ್ಲ.ಹೌದು.. ಈ ಪ್ರಕರಣದಲ್ಲಿ ಎಷ್ಟು ಜನರು ಇದ್ದಾರೆ ಎಂದೂ ಇದುವರೆಗೂ

ತಿಳಿದು ಬಂದಿಲ್ಲ. ಇಗಲಾದರೂ ಇದಕ್ಕೆ ಸಂಬಂದ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ತನಿಖೆ ಮಾಡ್ತಾರಾ?ಅಥವಾ ಇಲ್ಲವೋ..? ಎಂದು ನೋಡಬೇಕು. ಖಡಕ್ ಅಧಿಕಾರಿ ಎಂದೆ ಹೆಸರು ವಾಸಿಯಾಗಿರುವ ಆಯುಕ್ತರು ಇದರ ತನಿಖೆ ಬಗ್ಗೆ ಚುರುಕು ಮುಟ್ಟಿಸ್ತಾರಾ? ಎಂದು ಕಾದು ನೋಡೋಣ.ಅದು ಏನೇ ಇರಲಿ ಸತತ ಕಾರ್ಯಾಚರಣೆಯಲ್ಲಿ ನಿಮ್ಮ ಬಿಗ್ ಟಿವಿ ನ್ಯೂಸ್ ಮುಂದಾಗಿದೆ.ಸತತ ಇಲ್ಲೀಗಲ್ ಆಕ್ಟಿವಿಟೀಸ್ ಕಡಿವಾಣ ಹಾಕಲು ನಿಮ್ಮ ಬಿಗ್ ಟಿವಿ ನ್ಯೂಸ್ ಮುಂದಾಗಿದೆ…
bigtvnews | Hubli Dharwad News | Kannada News | Karnataka News Hubli News | News In Hubli | Local news

