ನವಲಗುಂದ : ತಾಲೂಕಿನ ಅಮರಗೋಳ ಕ್ರಾಸ್ ಬಳಿ ರವಿವಾರ ತಡರಾತ್ರಿ ಕೆ ಎಸ್ ಆರ್ ಟಿ ಸಿಯ ರಾಜಹಂಸ ಬಸ್ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೈಕ್ ಸವಾರರಾದ ಸುರೇಶ್ ಕಾಶಪ್ಪ ಕಂಬಾರ (38)ರಮೇಶ್ ನಿಂಗಪ್ಪ ಕಂಬಾರ (38)ಮೃತ ದುರ್ದೈವಿಗಳು ಮೂಲತಃ ಬದಾಮಿ ತಾಲೂಕಿನ ಮಾದಿಗಿ ಗ್ರಾಮದವರಾಗಿದ್ದು ಅವರು ಕಲಘಟಗಿ ತಾಲೂಕಿನ ಹೂಲಕೋಪ್ಪ ಗ್ರಾಮಕ್ಕೆ ತೆರಳುವ ವೇಳೆ ಮಾರ್ಗ ಮಧ್ಯದಲ್ಲಿ ಇಬ್ಬರು ಒಂದೇ ಬೈಕನಲ್ಲಿ ಸವಾರಿಸುತ್ತಿರುವಾಗ ಬಸ್ ಮತ್ತು ಬೈಕಿಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





