ನವಲಗುಂದ: ಸಾಲ ಭಾದೆ ತಾಳಲಾರದೇ ಯುವ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಅಮರಗೋಳ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಅಮರಗೋಳ ಗ್ರಾಮದ ನಿವಾಸಿ ಸಿದ್ದಪ್ಪ ವೀರಭದ್ರಪ್ಪ ಮಾದರ (35) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇವರು 3 ಎಕರೆ ಜಮೀನು ಹೊಂದಿದ್ದ ಇವರು ಸ್ಥಳೀತ ಬ್ಯಾಂಕ್ನಲ್ಲಿ 2 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಸರಿಯಾಗಿ ಮಳೆ ಮತ್ತು ಬೆಳೆ ಬಾರದೆ ಇರುವುದರಿಂದ ಸಾಲ ತೀರಿಸಲಾಗದೆ ನೋಟಿಸ್ಗಳಿಗೆ ಹೆದರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ. ಇನ್ನು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





