ಈ ಕೊಲೆಗೆ ಕಾರಣ ಏನು ಗೊತ್ತಾ…? ಹೆಣ್ಣಾ, ಹೊನ್ನಾ, ಮಣ್ಣಾ….?
ಹುಬ್ಬಳ್ಳಿ: ನಿನ್ನೆ ರಾತ್ರಿ ಮೂವತ್ತು ವರ್ಷದ ಯುವಕನೊಬ್ಬನನ್ನು ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ದುಷ್ಕರ್ಮಿಗಳು ಕೊಲೆ ಮಾಡಿ ಹುಬ್ಬಳ್ಳಿ ಸಮೀಪ ಶಿವಳ್ಳಿ ರಸ್ತೆಯ ರೇಲ್ವೇ ಬ್ರಿಡ್ಜ್ ಬಳಿ ಎಸೆದು ಹೋಗಿದ್ದಾರೆ.ಯುವಕನ ಕುತ್ತಿಗೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಹುಬ್ಬಳ್ಳಿ ಹೊರವಲಯದ ಶಿವಳ್ಳಿ ರಸ್ತೆಯ ರೈಲ್ವೆ ಬ್ರಿಡ್ಜ್ ಹತ್ತಿರ 30ವರ್ಷದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ವ್ಯಕ್ತಿಯ ಕುತ್ತಿಗೆ ಬಾಗಕ್ಕೆ ಭೀಕರವಾಗಿ ಇರಿದು ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಡಿಸಿಪಿ,ಎಸಿಪಿ ನಂದಗಾವಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಕೊಲೆಯಾದವನು ಯಾರು? ಕೊಲೆ
ಮಾಡಿದವರು ಯಾರು..? ಎಲ್ಲವೂ ಪೋಲೀಸ ತನಿಖೆಯಿಂದ ಮಾತ್ರ ತಿಳಿದು ಬರಬೇಕಾಗಿದೆ.ಪ್ರಕರಣ ದಾಖಲಿಸಿಕೊಂಡಿರುವ ಅಶೋಕ ನಗರ ಪೋಲೀಸ ಠಾಣೆಯ ಇನ್ಸ್ಪೆಕಟರ್ ಬಿ ಕೆ ಪಾಟೀಲ್ ತನಿಖೆ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

